ವಿಜಯಪುರ: ಪ್ರತ್ಯೇಕ ಎರಡು ಕೊಲೆ ಕೇಸ್ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ಸಿಂದಗಿ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಶಾಂತಾಬಾಯಿ ತಳವಾರ್ ಹತ್ಯೆಯ ಆರೋಪಿ ಸುರೇಶ ಮಲ್ಲಪ್ಪ ನಾಯ್ಕೋಡಿ ಊರ್ಫ ತಳವಾರ್ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ವಿಜಯಪುರದ ವಜ್ರಹನುಮಾನ್ ಗೇಟ್ ಬಳಿ ಶ್ರೀದೇವಿ ರಮೇಶ ತಳಕೇರಿಯನ್ನು ಆರೋಪಿ ಕಲ್ಲಪ್ಪ ಬಸಪ್ಪ ಸಿಂದಗಿ ಹತ್ಯೆಗೈದಿದ್ದ. ಅದಕ್ಕಾಗಿ ಎರಡು ಕೇಸ್ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.