ಧಾರವಾಡ: ಮದ್ಯದ ಅಮಲಿನಲ್ಲಿ ಕಳ್ಳನೋರ್ವ ಧಾರವಾಡ ನಗರದ ಜುಬ್ಲಿ ಸರ್ಕಲ್ ಹತ್ತಿರದ ಟವರ್ ಏರಿ ಕಿರಿಕ್ ಮಾಡಿರುವ ಘಟನೆ ನಡೆದಿದೆ. ಸತತವಾಗಿ ನಾಲ್ಕು ಗಂಟೆಕ್ಕಿಂತ ಹೆಚ್ಚಿನ ಕಾಲಾದ ವರೆಗೂ ಕಾರ್ಯಾಚರಣೆ ನಡೆಸಿ ಕಳ್ಳ ಜಾವೇದ್ನ್ನು ಕೆಳಗೆ ಇಳಿಸಲಾಯಿತು. ಒಂದು ಸಮಯದಲ್ಲಿ ಪೊಲೀಸರಿಗೆ ಕಣ್ಣು ತಪ್ಪಿಸಿ ಪರಾರಿಯಾಗಿ ಜೈಲು ಪಾಲಾಗಿದ್ದನು. ಅಲ್ಲದೇ, ತದನಂತರ ಕುಡಿತದ ದಾಸನಾಗಿದ್ದನು. ಇದೀಗ್ ಕುಡಿದು ಜಾವೇದ್ ಟವರ್ ಏರಿ ಕಿರಿಕ್ ಮಾಡಿದ್ದಾನೆ.