ವಿಜಯಪುರ: ಬಕ್ರೀದ್ ಹಬ್ಬ ಹಿನ್ನಲೆ ಜಮೀನಿನಲ್ಲಿರುವ ಕುರಿಗಳನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಮಟ್ಯಾಳ ಗ್ರಾಮದಲ್ಲಿ ನಡೆದಿದೆ.
ಮೂಲತಃ ಬೆಳಗಾವಿ ಜಿಲ್ಲೆಯ ರಾಯಬಾ ನಿವಾಸಿಗಳಾದ ಸತ್ಯಪ್ಪ ಬಡೆಗೋಳ, ಮಹಾದೇವ ಪೂಜಾರಿ, ಮಂಜು ಕದ್ದಿ ಎಂಬುವವರ 20 ಕುರಿಗಳನ್ನು ಕಳ್ಳತನಗೈದು ಪರಾರಿಯಾಗಿದ್ದಾರೆ. ಮೂವರು ಸಂಚಾರಿ ಕುರಿಗಾರರಾಗಿದ್ದು, ಮಟ್ಯಾಳ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ವೇಳೆಯಲ್ಲಿ ಕುರಿಗಳ ಕಳ್ಳತನವಾಗಿವೆ. ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.