ವಿಜಯಪುರ: ಎಲೆ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿಸಿ ಸಾವಿರಾರು ಮೌಲ್ಯದ ಎಲೆ ಹಾಗೂ ವಿವಿಧ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಬಾಬಾನಗರದಲ್ಲಿ ನಡೆದಿದೆ.
ಖಾಜಾಸಾಬ್ ಮುಲ್ಲಾ ಎಂಬುವರ ಎಲೆ ಅಂಗಡಿಯಲ್ಲಿ ಕಳ್ಳತನ ಆಗಿದೆ. ಅಲ್ಲದೇ, ಅಂಗಡಿಯ ಮೇಲ್ಛಾವಣಿಯ ತಗಡು ಕಟ್ ಮಾಡಿ ಒಳನುಗ್ಗಿ ಕಳ್ಳತನಗೈದು ಎಸ್ಕೇಪ್ ಆಗಿದ್ದಾರೆ. ತಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.