ವಿಜಯಪುರ: ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಮರವೊಂದು ಬೈಕ್ ಮೇಲೆ ಬಿದ್ದಿರುವ ಪರಿಣಾಮ ಸವಾರ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಮುದ್ದಾಪುರ ಬಳಿ ರವಿವಾರ ನಡೆದಿದೆ. ಸರ್ಕಾರಿ ಶಾಲೆಯ
ಶಿಕ್ಷಕ ಪ್ರಕಾಶ ಚಲವಾದಿ ಮೃತಪಟ್ಟಿರುವ ದುರ್ದೈವಿ. ಇನ್ನೂ ಕಳೆದ ಎರಡು ಗಂಟೆಗಳ ಹಿಂದೆ ಮಳೆ ಆಗಿತ್ತು. ಈ ಸಂದರ್ಭದಲ್ಲಿ ಮುದ್ದಾಪುರದಿಂದ ಮುದ್ದೇಬಿಹಾಳಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಈ ಸಾವು ನ್ಯಾಯವೇ..?
![](https://karnataka1news.com/wp-content/uploads/2023/04/accident-1.jpg)