ವಿಜಯಪುರ: ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ, ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ನಾಗಠಾಣ ಗ್ರಾಮದ ದುಂಡಪ್ಪ ಚಂದ್ರಾಮ ಗಿರಿಸಾಗರ, ಅಪ್ಪಣ್ಣಾ ಗಿರಿಸಾಗರ, ಯಲ್ಲವ್ವ ಅಪ್ಪಣ್ಣಾ ಗಿರಿಸಾಗರ ಶಿಕ್ಷೆಗೊಳಗಾದ ಆರೋಪಿಗಳು. ಶರಣಪ್ಪ ಸಿದ್ರಾಮಪ್ಪ ಅರಕೇರಿ ಎಂಬಾತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತಿದ್ದರು. ಇದರಿಂದ ನೊಂದುಕೊಂಡ ಶರಣಪ್ಪ, 2017ರ ಅಕ್ಟೋಬರ್ 24 ರಂದು ಜಮೀನಿನ ಬಳಿ ಹಳ್ಳದಲ್ಲಿ ಸರಕಾರಿ ಜಾಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆಗಿನ ಪಿಎಸ್ಐ ಸುರೇಶ ಆರ್.ಗಡ್ಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶಿವಾಜಿ ಅನಂತ ನಾಲವಾಡೆ ಅವರು ಪುರಾವೆಗಳನ್ನು ಅವಲೋಕಿಸಿ ಆರೋಪಿತರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಎಸ್.ಎಚ್. ಹಕೀಂ ಮಂಡಿಸಿದ್ದರು.
![](https://karnataka1news.com/wp-content/uploads/2023/11/hang.jpg)