ವಿಜಯಪುರ: ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕು ಎಂದು ವಿಜಯಪುರದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಮಳೆ ಹಾನಿ ಪ್ರದೇಶಕ್ಕೆ ಭೇಟಿ ಮಾಡಬೇಕು. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದನೆ ಮಾಡ್ಬೇಕು ಎಂದರು. ಅಲ್ಲದೇ, ಮೊನ್ನೆ ಬೆಳಗಾವಿಯಲ್ಲಿ ಸಚಿವ ಕಾರಜೋಳರಿಗೆ ಒತ್ತಾಯ ಮಾಡಿದ್ದೇವೆ. ಈಗಲೂ ಒತ್ತಾಯ ಮಾಡುತ್ತೇವೆ ಎಂದರು.
ಅಲ್ಲದೇ, ಅಪ್ನಾ ಟೈಂ ಆಯೇಗಾ ಎಂದು ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾವಣೆ ವಿಚಾರಕ್ಕೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತು ಅವರಿಗೆ ಆ ಅಧಿಕಾರ ಇದೆ. ಇದೊಂದು ಸೈಕಲ್, ತಿರುತ್ತಲೆ ಇರುತ್ತದೆ. ಈಗ ಅವರ ಕಾಲ ಇದೆ.. ಮತ್ತೆ ನಮ್ಮ ಕಾಲ ಬರುತ್ತದೆ. ಅದಕ್ಕಾಗಿ ಸ್ವಲ್ಪ ವೇಟ್ ಮಾಡಬೇಕಾಗುತ್ತದೆ ಎಂದರು.