ವಿಜಯಪುರ: ಹೊಸ ವರ್ಷಾಚರಣೆ ಹಿನ್ನಲೆ ಜಿಲ್ಲಾದ್ಯಂತ ಬಿಗಿ ಪೊಲೀಸ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ ಎಂದು ವಿಜಯಪುರದಲ್ಲಿ ಎಸ್ಪಿ ಋಷಿಕೇಶ ಸೋನಾವಣೆ ಹೇಳಿದರು. ಇಂದು ಸಂಜೆಯಿಂದಲೇ ಪೊಲೀಸ ರೌಂಡ್ಸ್ ಮಾಡಲಾಗುತ್ತದೆ. ಕೆಲವಡೆ ಒಳಾಂಗಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂತಹ ಜಾಗದಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ ಬಂದೋ ಬಸ್ತ್ ನಿಯೋಜಿಸಿಲಾಗಿದೆ. ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಅಲ್ಲದೇ, ರಾತ್ರಿ ತ್ರಿಬಲ್ ರೈಡಿಂಗ್ ವಾಹನ ಸವಾರರ ಮೇಲೆ ಕೇಸ್ ಹಾಕುವುದರ ಜೊತೆಗೆ ಅಂತಹ ವಾಹನಗಳನ್ನು ಸೀಜ್ ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಯಾವದಾದರೂ ಬಡಾವಣೆಯಲ್ಲಿ ಶಬ್ದ ಮಾಲಿನ್ಯ ಉಂಟು ಮಾಡಿದರೆ ಯಾರಾದರೂ ದೂರು ನೀಡಿದ್ರೇ ತಕ್ಷಣ ಕ್ರಮ ಜರುಗಿಸಲಾಗುವುದು. ಜಿಲ್ಲೆಯಾದ್ಯಂತ ಪೊಲೀಸ ಅಧಿಕಾರಿಗಳು ನಿರಂತರ ರೌಂಡ್ಸ್ ನಲ್ಲಿರುತ್ತಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಕ್ರಮ ಜರುಗಿಸಲಾಗುವುದು ಎಂದರು.