ವಿಜಯಪುರ: ಯುವಕನೋರ್ವ ವಿವಸ್ತ್ರವಾಗಿ ಮೊಬೈಲ್ ಟವರ್ ಏರಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಶನಿವಾರ ನಡೆದಿದೆ. ತೆಗ್ಗಿಹಳ್ಳಿ ಗ್ರಾಮದ ಸತೀಶ್ ಕಡಣಿ ಟವರ್ ಏರಿದ್ದಾನೆ. ಟವರ್ ತುದಿಯ ಮೇಲೆ ಹತ್ತಿ ಅಪಾಯಕಾರಿಯಾಗಿ ವರ್ತನೆ ಮಾಡಿದ್ದಾನೆ. ಯುವಕ ಟವರ್ ಮೇಲಿಂದ ಆಯಯಪ್ಪಿ ಬಿದ್ದರೆ ಅನಾಹುತಕ್ಕೀಡುವ ಸಂಭವ ಇದೆ. ಅದಕ್ಕಾಗಿ ತಕ್ಷಣವೇ ಸ್ಥಳಕ್ಕೆ ಆಲಮೇಲ ಪೊಲೀಸರು ಭೇಟಿ ನೀಡಿ, ಸತೀಶನ್ನು ಕೆಳಗೆ ಇಳಿಸುವ ಕೆಲಸ ಮಾಡುತ್ತಿದ್ದಾರೆ. ಆಲಮೇಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/07/IMG_20230708_145652-1024x590.jpg)