ಹುಬ್ಬಳ್ಳಿ: ಸಣ್ಣ ಜಗಳದಲ್ಲಿ ಯುವಕರಿಬ್ಬರಿಗೆ ಚಾಕು ಹಾಕಿರುವ ಘಟನೆ ಛೋಟಾ ಮುಂಬೈಯ ಖ್ಯಾತಿಯ ಹುಬ್ಬಳ್ಳಿಯ ದೇವಾಂಗಪೇಟೆಯ ಸ್ಮಶಾನದ ಬಳಿ ನಡೆದಿದೆ.
ಯುವಕರ ಗುಂಪುವೊಂದು ಕಾರ್ತಿಕ ಹಾಗೂ ನಾಗರಾಜ ಕುತ್ತಿಗೆ ಮತ್ತು ಎದೆಗೆ ಚಾಕು ಹಾಕಿ ಪರಾರಿಯಾಗಿದ್ದಾರೆ. ಸ್ಥಳೀಯರು ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಅಶೋಕ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.