ವಿಜಯಪುರ: ಅಂಗಡಿಯ ಕೀಲಿ ಮುರಿದು ಕಳ್ಳತನಕ್ಕೆ ಯತ್ನಿಸಿ, ಅಂಗಡಿ ಮಾಲೀಕನ ಕೈಗೆ ರೈಡ್ಯಾಗಿ ಸಿಕ್ಕಿಬಿದ್ದಿರುವ ಘಟನೆ ವಿಜಯಪುರ ನಗರದ ಸರಾಫ್ ಬಜಾರ್ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅನಿಲ ಬಂಧಿತ ಆರೋಪಿ. ಇನ್ನು ಓಂ ಸಾಯಿನಾಥ್ ಚಿನ್ನದ ಅಂಗಡಿಯ ಕೀಲಿ ಮುರಿಯಲು ಯತ್ನಿಸಿದ್ದಾಗ ಮಾಲೀಕ ಬಸವರಾಜ್ ಅಂಗಡಿಗೆ ಬಂದಿದ್ದಾನೆ. ಈ ವೇಳೆಯಲ್ಲಿ ಸಿಕ್ಕಿಬಿದ್ದಿರುವ ಕಳ್ಳ ಅನಿಲನ್ನು ಪೊಲೀಸರಿಗೆ ಮಾಹಿತಿ ನೀಡಿ, ಹಸ್ತಾಂತರ ಮಾಡಿದ್ದಾರೆ. ಈ ಘಟನೆ ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.