ವಿಜಯಪುರ: ಶಾಲೆಗಳಲ್ಲಿ ಬಿಸಿಯೂಟದ ಅಕ್ಕಿ ಸೇರಿದಂತೆ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶರತ್ ದೊಡಮನಿ, ಶ್ರೀಕಾಂತ್ ಕಟ್ಟಿಮನಿ, ಮಲ್ಲಿಕಾರ್ಜುನ ಮೋಪಗಾರ, ಸಂತೋಷ ಹೊಸಕೋಟಿ, ಸಂಜೀವಪ್ಪ ಮ್ಯಾಗೇರಿ, ಸಚಿನ ಹುಣಶ್ಯಾಳ ವಿರುದ್ಧ ಕೇಸ್ ದಾಖಲಾಗಿದ್ದು, ಅಲ್ಲದೇ, ಕಳ್ಳತನದ ಅಕ್ಕಿ ಖರೀದಿಸುತ್ತಿದ್ದ ರಾಹುಲ್ ಪವಾರ್, ನಾಗರಾಜ್ ಉಪ್ಪಿನನ್ನು ಕೂಡಾ ಬಂಧಿಸಲಾಗಿದೆ. ಹಿಟ್ನಳ್ಳಿ, ಇಟ್ಟಂಗಿಹಾಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದ ಸಾಮಗ್ರಿಗಳು ಕಳ್ಳತನ ಮಾಡುತ್ತಿದ್ದರು.
ಇನ್ನು ಬಂಧಿತರಿಂದ 2.70 ಲಕ್ಷ ಮೌಲ್ಯದ 50 ಕ್ವಿಂಟಾಲ್ ಅಕ್ಕಿ, 2.24 ಲಕ್ಷ ಮೌಲ್ಯದ 15 ಕ್ವಿಂಟಾಲ್ ತೊಗರಿ ಬೆಳೆ, ಎರಡು ಮಿನಿ ಗೂಡ್ಸ್, ಒಂದು ಕ್ರೂಜರ್, ಒಂದು ಲಕ್ಷದ 6 ಸಾವಿರ ನಗದು ಸೇರಿದಂತೆ 25 ಲಕ್ಷದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ತನಿಖಾ ತಂಡದಲ್ಲಿ ಸಿಪಿಐಗಳಾದ ಸಂಗಮೇಶ ಪಾಲಭಾವಿ, ಪಿಎಸ್ಐ ಜಿಎಸ್ ಉಪ್ಪಾರ್ ಸೇರಿದಂತೆ ಸಿಬ್ಬಂದಿಗಳು ಇದ್ದರು.