ವಿಜಯಪುರ: ಐತಿಹಾಸಿಕ ನಗರಿ ಖ್ಯಾತಿಯ ವಿಜಯಪುರದಲ್ಲಿ ಕಾರ್ ಶೋ ರೂಂಗಳಲ್ಲಿ ಸರಣಿ ಕಳ್ಳತನವಾಗಿದೆ. ನಗರದ ಹೊರವಲಯದಲ್ಲಿರುವ ವಿಜಯಪುರ ಬೆಂಗಳೂರು ಹೈವೇ ಪಕ್ಕದಲ್ಲಿರುವ 4 ಕಾರ್ ಶೋರೂಂಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಈ ಸರಣಿ ಕಳ್ಳರ ಬಗ್ಗೆ ಪೊಲೀಸರು ಕೈಗೊಂಡಿದ್ದ ತನಿಖೆ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಪೊಲೀಸ್ ಶ್ವಾನವೊಂದು ಕೆಲವೇ ಗಂಟೆಗಳಲ್ಲಿ ಶೋರುಂ ನಿಂದ ಕಳ್ಳತನವಾಗಿದ್ದ ಹಣದ ಪೆಟ್ಟಿಗೆ ಪತ್ತೆ ಮಾಡಿದೆ. ಜಿಲ್ಲಾ ಪೊಲೀಸ ಇಲಾಖೆಯಲ್ಲಿರುವ ಶ್ವಾನ ದಳದ ರೂಬಿ ಶೋರುಂನಿಂದ ಕಳ್ಳತನವಾಗಿದ್ದ ಹಣದ ಪೆಟ್ಟಿಗೆ ಪತ್ತೆ ಹಚ್ಚಿದೆ. ಕಬ್ಬಿಣದ ಬಿರುವನ್ನ ಶೋರೂಂ ನಿಂದ 1 ಕಿ.ಮೀ ದೂರದಲ್ಲಿ ಬಿಸಾಕಿದ್ದರು. ಕಳ್ಳತನವಾದ ಹಿನ್ನೆಲೆಯಲ್ಲಿ ರೂಬಿಯನ್ನ ಪೊಲೀಸರು ಶೋರುಂಗೆ ಕರೆತಂದಿದ್ದರು. ಈ ವೇಳೆ ಕಳ್ಳರ ವಾಸನೆ ಗ್ರಹಿಸಿದ ರೂಬಿ ಟೋಯೋಟಾ ಶೋರುಂನಿಂದ ಕಳ್ಳತನವಾಗಿ ಕಿಮೀ ದೂರದಲ್ಲಿ ಬಿದ್ದಿದ್ದ ಬೀರೂ ಪತ್ತೆ ಮಾಡಿದೆ. ದುರಾದೃಷ್ಟವಶಾತ್ ಬಿರೂ ಒಡೆದಿದ್ದ ಕಳ್ಳರು, ಬಿರೂ ಒಳಗಿದ್ದ ಹಣವನ್ನ ದೋಚಿಕೊಂಡು ಹೋಗಿದ್ದಾರೆ. 2019ರಲ್ಲಿ ರೂಬಿಯನ್ನ ಚಿತ್ರದುರ್ಗದ ಡಾಗ್ ಬ್ರೀಡರ್ ಬಳಿ 20 ಸಾವಿರ ರೂಪಾಯಿಗೆ ಖರೀದಿ ಮಾಡಲಾಗಿತ್ತು. ಅಲ್ಲಿಂದ 6 ತಿಂಗಳ ಕಾಲ ಬೆಂಗಳೂರಿನ ಆಡಗೋಡಿ ಶ್ವಾನ ದಳ ತರಬೇತಿ ಕೇಂದ್ರದಲ್ಲಿ ರೂಬಿ ಟ್ರೇನಿಂಗ್ ಪಡೆದುಕೊಂಡಿದೆ. ಬಳಿಕ ವಿಜಯಪುರ ಜಿಲ್ಲಾ ಶ್ವಾನದಳಕ್ಕೆ ರೂಬಿ ಸೇರ್ಪಡೆಯಾಗಿದೆ.
![](https://karnataka1news.com/wp-content/uploads/2023/06/IMG-20230530-WA0036-461x1024.jpg)