ವಿಜಯಪುರ: ಅಕ್ರಮವಾಗಿ ಅಂದರ್ ಬಾಹರ್ ಆಟವಾಡುತ್ತಿದ್ದಾಗ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಆಹೇರಿ ಗ್ರಾಮದಲ್ಲಿ ನಡೆದಿದೆ.
ಸಿದ್ದಪ್ಪ ಬಿಸನಾಳ, ಯಮನಪಯ ಮಳ್ಳಿಕೊಪ್ಪ, ಯಲ್ಲಪ್ಪ ಹಡಗಲಿ, ಇಬ್ರಾಹಿಂಸಾಬ್ ಹತ್ತರಕಿಹಾಳ, ಬಂದೇನವಾಜ್ ನಿಂಬಾಳ, ವಿಠಲ್ ಜಾಲವಾದಿ, ಪ್ರವೀಣ ಯಾಳವಾರ, ಬಡೇಸಾಬ್ ಹೊನ್ನುಟಗಿ, ರಜಾಕ್ಸಾಬ್ ಹತ್ತರಕಿಹಾಳ, ಲಾಲಸಾಬ್ ಸೌದಾಗರ್, ನಿಂಗನಗೌಡ ಬಿರಾದಾರ, ಮುಸ್ತಫಾ ಜಾತಗಾರ, ಮುರ್ತಜಿ ಹಿಟ್ನಳ್ಳಿ, ನಬಿಸಾಬ್ ಹಿಟ್ನಳ್ಳಿ, ಹುಸೇನಸಾಬ್ ಜಾತಗಾರ, ಸಂಗನಗೌಡ ಬಿರಾದಾರ, ಶರಣಗೌಡ ಬಿರಾದಾರ ವಿರುದ್ಧ ಕೇಸ್ ದಾಖಲಾಗಿದೆ.
ಇನ್ನೂ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುವಾಗ ಖಚಿತ ಮಾಹಿತಿ ಮೇರೆಗೆ ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ಪಿಎಸ್ಐ ಜಿಎಸ್ ಉಪ್ಪಾರ ನೇತೃತ್ವದಲ್ಲಿ ದಾಳಿಗೈದು 12, 470 ನಗದು ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.