ವಿಜಯಪುರ: ಆಡು ಮುಟ್ಟದ ಸೊಪ್ಪಿಲ್ಲ, ಹಾನಗಲ್ ಕುಮಾರ ಶಿವಯೋಗಿಗಳು ಮಾಡದ ಸಮಾಜ ಸೇವೆಯಿಲ್ಲ. ಶ್ರೀಗಳ ಬಗ್ಗೆ ಪ್ರಚಾರ ಮಾಡಲು ಚಲನಚಿತ್ರ ಮಾಡಿರುವ ಶಾಂತಲಿಂಗ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ ಎಂದು ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಸಿದ್ಧೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಸೋಮವಾರ ನಡೆದ ಗುರುದೇವ ಸೇವಾ ಸಂಸ್ಥೆ (ಸಮಾಧಾನ) ಅರ್ಪಿಸುವ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿಹಾರಿ ಚಲನಚಿತ್ರ ಪ್ರಚಾರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿವಯೋಗಿ ಮಂದಿರ ಮೂಲಕ ಹಲವಾರು ಸ್ವಾಮೀಜಿಗಳನ್ನು ಹುಟ್ಟು ಹಾಕಿದ ಹಾನಗಲ್ ಕುಮಾರ ಶಿವಯೋಗಿಗಳು, ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿದರು ಎಂದರು. ಇದಕ್ಕೂ ಮೊದಲು ವಿರಾಟಪುರ ವಿರಾಗಿ’ ಚಲನಚಿತ್ರ ಪ್ರಚಾರದ ಹಾನಗಲ್ ಕುಮಾರಸ್ವಾಮಿಗಳ ರಥಯಾತ್ರೆಯನ್ನು ಸೋಮವಾರ ಮುಖಂಡ ಚಂದ್ರಶೇಖರ ಇಂಡಿ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಮಸೂತಿಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ನಾಗಠಾಣ ಉದಯೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹತ್ರಳ್ಳಿ ಹಿರೇಮಠದ ಗುರುಪಾದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಗುಣದಾಳ ಕಲ್ಯಾಣಮಠದ ಡಾ.ವಿವೇಕಾನಂದ ದೇವರು, ರೇಣುಕದೇವರು ಬೆಳ್ಳುಬ್ಬಿ ದಿವ್ಯ ಸಮ್ಮುಖ ಹಾಗೂ ಶೈಲಜಾ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿದ್ದರು.
ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ವಿ.ಸಿ.ನಾಗಠಾಣ, ಪ್ರಕಾಶ ಬಗಲಿ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಮುಖಂಡರಾದ ಎಸ್.ಎ.ಪಾಟೀಲ, ಅರುಣ ಹುಂಡೇಕಾರ, ಸೋಮಶೇಖರ ಬೋಗಶೆಟ್ಟಿ, ಶ್ರೀಶೈಲಗೌಡ ಪಾಟೀಲ, ಭಿಮಸಿ ಬಿರಾದಾರ, ಪ್ರಕಾಶ ಕದರಿ ಇದ್ದರು. ಉಪನ್ಯಾಸಕ ರಾಜೇಂದ್ರಕುಮಾರ್ ಬಿರಾದಾರ ನಿರೂಪಿಸಿದರು.