ವಿಜಯಪುರ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ದೇಹತ್ಯಾಗದ ಹಿನ್ನಲೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣ, ನಾಲತವಾಡದಲ್ಲಿ ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಮಹಿಳೆಯರಿಂದ ತಾಳಿಕೋಟೆಯ ಪಟ್ಟಣದ ರಾಜವಾಡೆಯಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ವಿಠ್ಠಲ ಮಂದಿರದ ಬಳಿಯೂ ನುಡಿನಮನ ಕಾರ್ಯಕ್ರಮ ಬಳಿಕ ಶ್ರೀಗಳ ಅಂತಿಮದರ್ಶನ ಪಡೆಯಲಿರುವ ತಾಳಿಕೋಟೆಯ ಭಕ್ತರು.
ಅಂತಿಮದರ್ಶನಕ್ಕಾಗಿ ಭಕ್ತರಿಗಾಗಿ ಹತ್ತು ಬಸ್’ಗಳ ವ್ಯವಸ್ಥೆ ಕೂಡ ಮಾಡಲಾಗಿದೆ.
ನಡೆದಾಡುವ ದೇವರು ಲಿಂಗೈಕ್ಯ.. ತಾಳಿಕೋಟೆ, ನಾಲತವಾಡ ಸ್ವಯಂಪ್ರೇರಿತವಾಗಿ ಬಂದ್..
![ನಡೆದಾಡುವ ದೇವರು ಲಿಂಗೈಕ್ಯ.. ತಾಳಿಕೋಟೆ, ನಾಲತವಾಡ ಸ್ವಯಂಪ್ರೇರಿತವಾಗಿ ಬಂದ್.. ನಡೆದಾಡುವ ದೇವರು ಲಿಂಗೈಕ್ಯ.. ತಾಳಿಕೋಟೆ, ನಾಲತವಾಡ ಸ್ವಯಂಪ್ರೇರಿತವಾಗಿ ಬಂದ್..](https://karnataka1news.com/wp-content/uploads/2023/01/IMG_20230103_105127-860x487.jpg)