ಡಿಸ್ಕೌಂಟ್ ಚಿನ್ನದ ಆಸೆ ! 8 ಲಕ್ಷ ವಂಚನೆ..
ವಿಜಯಪುರ: ಡಿಸ್ಕೌಂಟ್ನಲ್ಲಿ ಬಂಗಾರ ಕೊಡಿಸುವುದಾಗಿ 8 ಲಕ್ಷ ನಗದು ಬ್ಯಾಂಕ್ ಅಕೌಂಟ್ಗೆ ಹಾಕಿಸಿಕೊಂಡು ವಂಚಿಸಿದ ಘಟನೆ ವಿಜಯಪುರ ನಗರದ ನವರಸಪುರ ಕಾಲೋನಿಯಲ್ಲಿ ನಡೆದಿದೆ. ಹುಸೇನಬಾದಷಾ ಮೋದಿನಬಾಷಾ ಸಜ್ಜಾದೆ ಮೋಸ ಹೋದವರು. ಕೊಪ್ಪಳ ಭಾಗ್ಯ ನಗರದ ಶಶಿಧರ ಗೋವಿಂದಪ್ಪ ಪತ್ತಾರ ಹಾಗೂ ಶೇಖಯ್ಯ ಮಹಾಂತಯ್ಯ ಚಿಕ್ಕಮಠ ಎಂಬುವರೇ ಹುಸೇನ್ಬಾದಷಾಗೆ ವಂಚಿಸಿದ ಆರೋಪಿಗಳು. ಎಚ್ಡಿಎಫ್ಸಿ(HDFC) ಬ್ಯಾಂಕ್ ಎಟಿಎಂನಲ್ಲಿ ಹುಸೇನ್ಬಾದಷಾಗೆ ಕಡಿಮೆ ಡಿಸ್ಕೌಂಟ್ನಲ್ಲಿ ಬಂಗಾರ ಕೊಡಿಸುವುದಾಗಿ ನಂಬಿಸಿದ್ದಾರೆ. ಅದಕ್ಕೆ ಒಪ್ಪಿ 8 ಲಕ್ಷ ಹಣವನ್ನು ಎಚ್ಡಿಸಿಎಫ್ ಸಿ ಬ್ಯಾಂಕ್ ಖಾತೆ: 50200088251258 ಹಾಗೂ 50200060749082 ನಂಬರ್ಗಳಿಗೆ ಎಟಿಎಂ ಮೂಲಕ ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಆದರ್ಶನಗರ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.