ಬೆಳಗಾವಿ: ವಾಹನವೊಂದರಲ್ಲಿ ಬಂದಿದ್ದ ಅಪರಿಚಿತರು ಇಬ್ಬರನ್ನು ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿರುವ ಘಟನೆ ಕುಂದಾನಗರಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಶಿಂಧೊಳ್ಳಿಯಲ್ಲಿ ಬಸವರಾಜ್ ಬೆಳಗಾಂವ್ಕರ್, ಗಿರೀಶ್ ನಾಗಣ್ಣನವರ ಕೊಲೆಗೈದು ಅಪರಿಚಿತರು ಪರಾರಿಯಾಗಿದ್ದಾರೆ. ಸರ್ಕಾರಿ ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಆಡುವಾಗ ಏಕಾಏಕಿ ಅಪರಿಚಿತರು ಇಬ್ಬರ ಮೇಲೆ ಅಟ್ಯಾಕ್ಗೈದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.