ವಿಜಯಪುರ: ಭೀಮಾತೀರದಲ್ಲಿ ಗನ್ ಗ್ಯಾಂಗ್ನ್ನು ಪೊಲೀಸರು ಒಂದೇ ದಿನದಲ್ಲಿ ಅಂದರ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅರ್ಜನಾಳನಲ್ಲಿ ನಡೆದಿದೆ.
ಇಮ್ರಾನ ಸುಭಾಸ ಪಟೇಲ್, ಅರುಣಕುಮಾರ ಲಾಲಸಿಂಗ್ ರಾಠೋಡ, ಸೂರಜ ವಿಠ್ಠಲ ಗಾಯಕವಾಡ, ಕರ್ಣ ಶರತ ಪವಾರ, ಸ್ವಪ್ನೀಲ ಶಿವಾಜಿ ಲಕಡೆ ಬಂಧಿತ ಆರೋಪಿಗಳು. ಬಂಧಿತರು ಮೂಲತಃ ಮಹಾರಾಷ್ಟ್ರ ಜಿಲ್ಲೆಯ ಸಾತಾರ ಜಿಲ್ಲೆಯ ಹಾಲಿ ನಿವಾಸಿಗಳು. ಇನ್ನು ಬಂಧಿತರಿಂದ 2 ಲಾಂಗ್, 1 ಕಂಟ್ರಿ ಪಿಸ್ತೂಲ್, ಖಾರದ ಪುಡಿಗಳು ,10 ಫೂಟ್ ನೂಲಿನ ಹಗ್ಗ, 2 ವಾಹನಗಳನ್ನು ಪೊಲೀಸರು ಜಪ್ತಿಗೈದಿದ್ದಾರೆ. ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೇ, ಈ ಗನ್ ಗ್ಯಾಂಗ್ ಹಿಂದೆ ಬೇರೆಯದೇ ಮಸಲತ್ತು ಇದೇ ಎಂದು ಉನ್ನತ ಪೊಲೀಸರು ಮಾಹಿತಿ ನೀಡಿದ್ದು, ಪೊಲೀಸರ ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿದುಬರಲಿದೆ.