ವಿಜಯಪುರ: ನಾನು ಫೋನ್ ಮಾಡಿ ಹೇಳಿದಕ್ಕೆ ಪೊಲೀಸ್ ಅಧಿಕಾರಿ IPS ಆಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಪಂಚಮಸಾಲಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಾತನಾಡಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಒಂದು ಫೋನ್ ಮಾಡಿದೆ. ಒಬ್ಬ ಪೊಲೀಸ್ ಅಧಿಕಾರಿಗೆ 6 ತಿಂಗಳನಿಂದ ಅಡ್ಡಾಡಸ್ತಾ ಇದ್ದಾರೆ. ಅದಕ್ಕಾಗಿ ನನ್ನ ಫೋನ್ ಕರೆಗೆ ಗೃಹ ಸಚಿವರು ಇಮಿಡೆಟ್ ಫೈಲ್ ಕ್ಲಿಯರ್ ಮಾಡಿದ್ದಾರೆ.
ಅಲ್ಲದೇ, ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಹುನ್ನಾರ ನಡೆದಿತ್ತು. ಈ ಮೂಲಕ ಯತ್ನಾಳ ರಾಜಕೀಯ ಜೀವನ ಮತ್ತು ಪಂಚಮಸಾಲಿ ಹೋರಾಟ ಮುಗಿಸಲು ಬಹಳ ಜನ ಪ್ರಯತ್ನಿಸಿದರು. ಆದರೆ ಜನ ಅಭಿವೃದ್ಧಿ ನೋಡಿ ಮತ ಹಾಕಿ ಗೆಲುವು ನೀಡಿದ್ದಾರೆ ಎಂದರು.