ವಿಜಯಪುರ: ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಟೀಂ ಇಂಡಿಯಾ ಫೈನಲ್ಗೆ ಪ್ರವೇಶ ಹಿನ್ನೆಲೆ ಶುಭಕೋರಿ, ಭಾರತ ವಿಶ್ವಕಪ್ ಗೆಲ್ಲುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲ ಆಟಗಾರರಿಗೆ ಶುಭಕೋರುತ್ತೇನೆ. ನಾನು ಸಹ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಮ್ಯಾಚ್ ನೋಡಿದೆ. ಬೌಲರ್ ಮಹಮ್ಮದ್ ಶಮಿ ಉತ್ತಮವಾಗಿ ಆಟವಾಡಿದ್ರು.
ನಮ್ಮ ಟೀಂ ಪುಲ್ ಪಾರ್ಮ್ನಲ್ಲಿದೆ. ಕೊಹ್ಲಿ ಕೂಡ ಪಾರ್ಮ್ನಲ್ಲಿದ್ದಾರೆ ಎಂದರು.