ಧಾರವಾಡ: ಹೋಳಿ ಹಬ್ಬದ ದಿನ ಕೆರೆಯಲ್ಲಿ ಈಜಲು ಹೋಗಿ ಯುವಕ ಈಜಲು ಬಾರದೇ ಅಸುನೀಗಿರುವ ಘಟನೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ನಡೆದಿದೆ. ಅಣ್ಣಪ್ಪಾ ದಾಸನಕೊಪ್ಪ (27) ಮೃತಪಟ್ಟಿರುವ ದುರ್ದೈವಿ.
ನಿಗದಿ ಹಿರಿಯ ಕೆರೆಯಲ್ಲಿ ಈಜಲು ಬಾರದೇ ಅಣ್ಣಪ್ಪ ಸಾವನ್ನಪ್ಪಿದ್ದಾನೆ. ಹೋಳಿ ಹಬ್ಬದ ನಿಮಿತ್ತ ಬಣ್ಣ ಆಡಿ ಕೆರೆಯಲ್ಲಿ ಈಜಲು ಹೋಗಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಕೇಸ್ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಹೋಳಿ ಹಬ್ಬದಲ್ಲಿ ಯುವಕ ಸಾವು
![](https://karnataka1news.com/wp-content/uploads/2023/03/IMG-20230307-WA0117.jpg)