ವಿಜಯಪುರ: ಸಿಡಿಲು ಬಡಿದು14 ಕುರಿಗಳ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದಿದೆ.
ಕುರಿಗಳನ್ನು ಮೇಯಿಸೋವಾಗ ಸಿಡಿಲು ಬಡಿದು ದುರ್ಘಟನೆ ಆಗಿದ್ದು, ದೊಂಡಿಬಾ ಸಂಡಗೆ ಎಂಬುವವರಿಗೆ ಸೇರಿದ ಕುರಿಗಳು ಅಸುನೀಗಿದ್ದಾವೆ. ಇನ್ನು ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದ ದೊಂಡಿಬಾ ಕುರಿಗಳನ್ನು ಮೇಯಿಸಲು ಮಸೂತಿ ಗ್ರಾಮಕ್ಕೆ ಬಂದಿದ್ದಾನೆ. ಈ ವೇಳೆಯಲ್ಲಿ ಸಿಡಿಲಿಗೆ ಕುರಿಗಳು ಬಲಿ ಆಗಿದ್ದಾವೆ.
ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.