ವಿಜಯಪುರ: ಆಜಾನ್ ಹಾಗೂ ಹನುಮಾನ್ ಚಾಲಿಸ್ ವಿವಾದಕ್ಕೆ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ನಗರದಲ್ಲಿ ಎಸ್ಪಿ ಎಚ್ ಡಿ ಆನಂದಕುಮಾರ ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ 1999 ಚರ್ಚ್, ಮಸೀದಿ, ದೇವಾಲಯಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಇನ್ನಿತರ ಕಡೆಗಳಲ್ಲೂ ಶಬ್ದ ಮಾಲಿನ್ಯ ಮಾಡಿದ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಅಂಥ 123 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಈ ದೇಶದ, ನೆಲದ ಕಾನೂನು ಗೌರವಿಸಬೇಕು ಎಂದರು.