ವಿಜಯಪುರ : ಸಿಡಿಲು ಬಡಿದಿದ್ದರಿಂದ ಒಬ್ಬ ಕುರಿಗಾಯಿ ಸೇರಿದಂತೆ 20 ಕುರಿಗಳು ಮೃತಪಟ್ಟ ಘಟನೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಈ ಘಟನೆಯಿಂದ ಕುರಿಗಾಯಿ ಕುಟುಂಬಕ್ಕೆ ಅಪಾರ ನಷ್ಟ ಉಂಟಾಗಿದೆ. ಗ್ರಾಮದ ಅಮೋಘಿ ಶಿವಣಗಿ (39) ಮೃತಪಟ್ಟ ಕುರಿಗಾಯಿ. ಸಂಜೆ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಆಕಸ್ಮಿಕ ಸಿಡಿಲು ಬಡಿದಿದ್ದರಿಂದ ಕುರಿಗಾಯಿ ಹಾಗೂ 20 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಇದರಿಂದಾಗಿ ಕುರಿಗಾಯಿ ಕುಟುಂಬಕ್ಕೆ ಅಪಾರ ನಷ್ಟವುಂಟಾಗಿದ್ದು, ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಕಾಖಂಡಕಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.