ವಿಜಯಪುರ: ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿಕಾರಿದರು. ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದಲ್ಲಿ ಮಂಗಳವಾರ ಸಿಎಂ ಬಸವರಾಜ್ ಬೊಮ್ಮಾಯಿ ಮಾಧ್ಯಮದ ಎದುರು ಮಾತನಾಡಿ, ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಘೋಷಣೆ ಹಿನ್ನೆಲೆ ಇನ್ನು ನಾಲ್ಕು ಘೋಷಣೆ ಮಾಡ್ಲಿ ಏನು ತೊಂದರೆ ಇಲ್ಲ.
ಯಾವ್ಯಾವ ರಾಜ್ಯದಲ್ಲಿ ಏನೇನೆ ಘೋಷಣೆ ಮಾಡಿದ್ದಾರೆ ಟ್ರ್ಯಾಕ್ ರಿಕಾರ್ಡ್ ಇದೆ ಎಂದು ವಾಗ್ದಾಳಿ ಮಾಡಿದರು. ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಇದೆ.
ಇದು ಕರ್ನಾಟಕ. ಕೆಲಸಗಳನ್ನು ನೋಡಿ ಜನತೆ ತೀರ್ಮಾನ ಮಾಡ್ತಾರೆ ಎಂದರು. ಅಲ್ಲದೇ,
ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪಾಸಿಟಿವ್ ವಿಚಾರ ಮಾಡ್ತೇವಿ. ಮಾಜಿ ಸಿಎಂ ಸಿದ್ದರಾಮಯ್ಯ ಮತಕ್ಷೇತ್ರ ಬಗ್ಗೆ ಕಮೆಂಟ್ ಮಾಡಲ್ಲ. ಸಿದ್ದರಾಮಯ್ಯ ಹಿರಿಯ ನಾಯಕರು. ಅವರ ಮತಕ್ಷೇತ್ರದ ಬಗ್ಗೆ ಅವರೇ ತೀರ್ಮಾನ ಮಾಡ್ತಾರೆ ಎಂದರು.
4*4 ಗ್ಯಾರಂಟಿ ಟಾಕ್ ಸಿಎಂ ಬೊಮ್ಮಾಯಿ
![](https://karnataka1news.com/wp-content/uploads/2023/03/Basavaraj-bommai-1-860x860.jpg)