ಗುಮ್ಮಟನಗರಿ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ

Karnataka 1 News
ಗುಮ್ಮಟನಗರಿ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
  1. ವಿಜಯಪುರ ::

*ಮನೆ ಕಳ್ಳತನ ಹಾಗೂ ಇತರೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿತರ ಬಂಧನ*

ವಿಜಯಪುರ ನಗರದಲ್ಲಿ ಇತ್ತೀಚೆಗೆ ಘಟಿಸುತ್ತಿದ್ದ ಮನೆ, ಇತರೆ ಕಳ್ಳತನ ಹಾಗೂ ಮೋಸ ಮಾಡಿ ನಕಲಿ ಬಂಗಾರದ ನಾಣ್ಯಗಳನ್ನು ಕೊಟ್ಟು ಹಣ ತೆಗೆದುಕೊಂಡ ಪ್ರಕರಣಗಳಲ್ಲಿಯ ಆರೋಪಿತರ ಪತ್ತೆ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಶ್ರೀ ಲಕ್ಷ್ಮಣ ನಿಂಬರಗಿ ಪೊಲೀಸ್ ಅಧೀಕ್ಷಕರು, ವಿಜಯಪುರ ಜಿಲ್ಲೆ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಶಂಕರ ಮಾರಿಹಾಳ, ಹಾಗೂ ರಾಮನಗೌಡ ಹಟ್ಟಿ, ವಿಜಯಪುರ ಜಿಲ್ಲೆ, ಹಾಗೂ ಪೊಲೀಸ್ ಉಪ-ಅಧೀಕ್ಷಕರು ಶ್ರೀ ಬಸವರಾಜ ಯಲಿಗಾರ, ವಿಜಯಪುರ ನಗರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಶ್ರೀ ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಮ್ಮಜ ವೃತ್ತ, ವಿಜಯಪುರ ರವರ ನೇತೃತ್ವದಲ್ಲಿ ಸೀತಾರಾಮ ಲಮಾಣಿ, ಪಿಎಸ್‌ಐ (ಕಾ&ಸು), ಪ್ರೇಮಾ ಕುಚಬಾಳ ಪಿಎಸ್‌ಐ[ಅವಿ] ಆದರ್ಶನಗರ ಪೊಲೀಸ್ ಠಾಣೆ. ಜ್ಯೋತಿ ಖೋತ, ಪಿಎಸ್‌ಐ (ಕಾ&ಸು) ಎ.ಪಿ.ಎಮ್.ಸಿ ಪೊಲೀಸ್ ಠಾಣೆ. ಡಿ ಎಮ್ ಸಂಗಾಪೂರ, ಪಿಎಸ್‌ಐ (ಕಾ&ಸು), ಸಿ ಆರ್ ಸಾಗರ, ಪಿಎಸ್‌ಐ (ಅವಿ) ಜಲನಗರ ಪೊಲೀಸ್ ಠಾಣೆ ಹಾಗೂ ಎಂ ಡಿ ಘೋರಿ, ಪಿಎಸ್‌ಐ (ಕಾ&ಸು), ಗೋಲಗುಮ್ಮಜ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರನ್ನು ಒಳಗೊಂಡ ಒಂದು ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು.

ಸದರಿ ತನಿಖಾ ತಂಡವು ಖಚಿತ ಮಾಹಿತಿಯನ್ನು ಕಲೆಹಾಕಿ ಕಾನೂನು ಸಂಘರ್ಷಕ್ಕೊಳಪಟ್ಟ ಒಬ್ಬ ಬಾಲಕ ಸೇರಿದಂತೆ ಒಟ್ಟು 14 ಜನ ಆರೋಪಿತರನ್ನು ದಸ್ತಗಿರಿ ಮಾಡಿ ವಿಜಯಪುರ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 12 ಸ್ವತ್ತಿನ ಪ್ರಕರಣಗಳಲ್ಲಿ ಒಟ್ಟು- 271 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ನಗದು ಹಣ-30,00,000/- ರೂಪಾಯಿ ಹಾಗೂ ವಿವಿಧ ಕಂಪನಿಯ 04 ಮೋಟರ ಸೈಕಲಗಳು, ಒಂದು T&H 210 ಕಂಪನಿಯ ಹಿಟ್ಯಾಚ್ BREAKER, ಒಂದು VOLTAS COMPANY AC ಈ ರೀತಿಯಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಹೀಗೆ ಒಟ್ಟು 67,79,500/- ರೂ ಕಿಮ್ಮತ್ತಿನ ವಸ್ತುಗಳನ್ನು ಜಪ್ತ ಪಡಿಸಿಕೊಂಡು, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

filter: 0; fileterIntensity: 0.0; filterMask: 0; captureOrientation: 0;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;

 

 

 

 

ಸದರಿ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ & ಸಿಬ್ಬಂದಿಯವರ ಕರ್ತವ್ಯವನ್ನು ಶ್ಲಾಘಿಸಲಾಗಿದೆ.

*ಮನೆ ಕಳ್ಳತನ ಪತ್ತೆ ಮಾಡಿದ ಪ್ರಕರಣಗಳ ಮಾಹಿತಿ*

*1) ಜಲನಗರ ಪೊಲೀಸ್ ಠಾಣೆ ಗುನ್ನೆ ನಂ-107/2024 ಕಲಂ 331 (3) 305 ಬಿಎನ್ಎಸ್-2023*

ಸದರ ಪ್ರಕರಣದಲ್ಲಿ ಗುನ್ನೆ ಮಾಡಿದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಂದ ಒಟ್ಟು- 51 ಗ್ರಾಂ ತೂಕದ ಬಂಗಾರದ ಸಾಮಾನುಗಳು ಆ:ಕಿ 4,80,000/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

*2) ಆದರ್ಶನಗರ ಪೊಲೀಸ್ ಠಾಣೆ ಗುನ್ನೆ ನಂ-121/2024 600 331(3), 305 222-2023*

ಆರೋಪಿತನಾದ ಮುರ್ತುಜಸಾಬ @ ಬಾಬಾ ಮೊಹೃದಆದಿಲಶಾಹ ಖಾನ, 21 ವರ್ಷ. ಉದ್ಯೋಗ: ಕೂಲಿ ಸಾ॥ ರಾಯಲ್ ಮ್ಯಾರೇಜ ಹಾಲ್ ಹತ್ತಿರ, ಗ್ಯಾಂಗ್ ಬಾವಡಿ ವಿಜಯಪುರ, ಈತನಿಂದ ಒಟ್ಟು- 45 ಗ್ರಾಂ ತೂಕದ ಬಂಗಾರದ ಸಾಮಾನುಗಳನ್ನು ಮತ್ತು 03 ಮೋಟರ ಸೈಕಲಗಳು ಒಟ್ಟು ಸೇರಿ 5.10.000/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

*3) ಎಪಿಎಮ್ ಸಿ ಪೊಲೀಸ್ ಠಾಣೆ ಗುನ್ನೆ ನಂ-81/2024 & 92/2024 ಕಲಂ: 331(3)305 ಬಿಎನ್‌ಎಸ್ 2023*

ಆರೋಪಿತನಾದ ಮೋದಿನಸಾಬ @ ಮೋದ್ಯಾ ಸರ್ದಾರಸಾಬ ವಾಲೀಕಾರ ಸಾ॥ ಹಾವಿನಾಳ, ತಾ। ಚಡಚಣ ವಿಜಯಪುರ ಜಿಲ್ಲೆ. ಈತನ ಕಡೆಯಿಂದ 02 ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು- 172 ಗ್ರಾಂ ಬಂಗಾರದ ಆಭರಣಗಳನ್ನು [ಅ:ಕಿ-10.32,000/-] ವಶಪಡಿಸಿಕೊಂಡಿದ್ದು ಇರುತ್ತದೆ.

*ನಕಲಿ ಬಂಗಾರದ ನಾಣ್ಯಗಳನ್ನು ತೋರಿಸಿ ಹಣ ದೋಚಿದ ಪ್ರಕರಣಗಳ ವಿವರ.*

*1) ಗೋಲಗುಮ್ಮಜ್ ಪೊಲೀಸ್ ಠಾಣೆ ಗುನ್ನೆ ನಂ-117/2024 ಕಲಂ 318(4), 316(2) ಬಿಎನ್ಎಸ್-2023*

ಆರೋಪಿತನಾದ ಕೆ.ಮುನೇಶ್ ರಮೇಶ ಕೆ.ಹನುಮಂತಪ್ಪ, 26 ವರ್ಷ, ಸಾ॥ ಗರಗ ತಾ॥ ಹೊಸಪೇಟೆ ಜಿ ವಿಜಯನಗರ, ಈತನ ಕಡೆಯಿಂದ ಒಟ್ಟು 10,00,000/- ರೂಪಾಯಿಗಳನ್ನು ಹಾಗೂ ಪಿರ್ಯಾದಿಯ ಮೊಬೈಲ್ ಪೋನ್‌ನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
**2) ಆದರ್ಶನಗರ ಪೊಲೀಸ್ ಠಾಣೆ ಗುನ್ನೆ ನಂ-107/2024 ಕಲಂ 331(3), 305 ಬಿಎನ್ಎಸ್-2023*

ಆರೋಪಿತನಾದ ಮುದಸ್ಸರ್ ಉರ್ಫ ಮುಖ್ಯಾ ಅಬ್ದುಲಹಮೀದ ಉರ್ಫ ಅಬ್ದುಲ್ ಅಹಮದ ಪಠಾಣ 30 ವರ್ಷ, ಸಾ:ಶಕ್ತಿ ನಗರ ದರ್ಗಾರೋಡ ವಿಜಯಪುರ, ಈತನ ಕಡೆಯಿಂದ ಒಟ್ಟು- 03 ಗ್ರಾಂ ಬಂಗಾರದ ಕಿವಿಯೊಲೆ ಹಾಗೂ 2500/-ಹಣ ಹೀಗೆ ಒಟ್ಟು-14,500/- ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

*3) ಆದರ್ಶನಗರ ಪೊಲೀಸ್ ಠಾಣೆ ಗುನ್ನೆ ನಂ: 118/2024 ಕಲಂ: 303[2] 305 ಬಿಎನ್ ಎಸ್-2023*

ಆರೋಪಿತನಾದ ಆಶೀಫ್ ಉಸ್ಥಾನ ಜಮಾದಾರ 33 ವರ್ಷ, ಸಾ: ಶಾಲಿ ಹುಸೇನಿ ನಗರ ವಿಜಯಪುರ. ಈತನ ಕಡೆಯಿಂದ VOLTAS COMPANY AC ಮತ್ತು AC OUT DOOR UNIT-02 ಹೀಗೆ ಒಟ್ಟು-40,000/- ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

*4] ಆದರ್ಶನಗರ ಪೊಲೀಸ್ ಠಾಣೆ ಗುನ್ನಾ ನಂ: 105/2024 ಕಲಂ: 303[2] ಬಿಎನ್ಎಸ್-2023*

ಆರೋಪಿತರಾದ-1) ಶೆಟ್ಟಿ @ ಸತೀಶ ಗೆಮು ರಾಠೋಡ, 51 ವರ್ಷ, ಉದ್ಯೋಗ- ಹೋಟೆಲ, ಸಾ॥ ಆಕುಂಟೆ ನಗರ ವಿಜಯಪುರ, 2) ಮಾರುತಿ ಶಂಕರ ರಾಠೋಡ, 29 ವರ್ಷ, ಸಾ॥ ಅಕುಂಟಿ ನಗರ ವಿಜಯಪುರ 3] ಮೌಲಾಲಿ ಹುಸೇನಸಾಬ ಮಮದಾಪೂರ, 45 ವರ್ಷ, ಸಾ॥ ಜೈನ್ ಮಂದಿರ ಹತ್ತಿರ ವಿಜಯಪುರ, ಇವರ ಕಡೆಯಿಂದ T&H-210 ಕಂಪನಿಯ ಹಿಟ್ಯಾಚ್ BREAKER ಆ:ಕಿ 4,50,000/- ಕಿಮ್ಮತ್ತಿನದ್ದನ್ನು ವಶಪಡಿಸಿಕೊಂಡಿದ್ದು ಇರುತ್ತದೆ

*5) ಎಪಿಎಮ್ ಸಿ ಪೊಲೀಸ್ ಠಾಣೆ ಗುನ್ನೆ ನಂ-107/2024 ಕಲಂ- 303(2) ಬಿಎನ್ ಎಸ್-2023*

ಆರೋಪಿತನಾದ ರುದ್ರೇಶ ಗಂಗಪ್ಪ ಬಡಿಗೇರ, 42 ವರ್ಷ, ಸಾ॥ ಇಂಡಿ ರಸ್ತೆ ಬಂಬಾಳ ಅಗಸಿ ವಿಜಯಪುರ. ಈತನ ಕಡೆಯಿಂದ ಒಟ್ಟು-1,65,000/-ರೂ ಕಿಮ್ಮತಿನ ಬೆಲೆಬಾಳುವ ಸಾಮಾನುಗಳು ವಶಪಡಿಸಿಕೊಂಡಿದ್ದು ಇರುತ್ತದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";