ವಿಜಯಪುರ: ಬೃಹತ್ ಮೊಸಳೆ ಮನೆಯ ಎದುರು ಕಾಣಿಸಿಕೊಂಡು ಜನತೆಯಲ್ಲಿ ಭಯಭೀತ ವಾತಾವರಣ ನಿರ್ಮಾಣವಾಗಿರುವ ಘಟನೆ ಮೊಸರುನಾಡಿನಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಚಿಕ್ಕ ಗರಸಂಗಿ ಗ್ರಾಮದ ಮನೆ ಹತ್ತಿರ ಕಾಣಿಕೊಂಡ ಸುಮಾರು 4 ಅಡಿ ಉದ್ದದ ಮೊಸಳೆಯನ್ನು ಗ್ರಾಮದ ಯುವಕರು ಹಗ್ಗದ ಸಹಾಯದಿಂದ ಕಟ್ಟಿ ರಕ್ಷಣೆ ಮಾಡಿದ್ದಾರೆ. ತದನಂತರ ಮೊಸಳೆಯನ್ನು ಟ್ರಾಕ್ಟರ್ ಮೂಲಕ ಕೃಷ್ಣಾ ನದಿಗೆ ಬಿಡಲಾಗಿದೆ. ಮೊಸಳೆ ರಕ್ಷಣೆ ಕಾರ್ಯಚರಣೆಯಲ್ಲಿ ಯುವಕರಾದ ಕುಮಾರ ಬಿರಾದಾರ, ಉಮೇಶ್ ಸಿದ್ದಣ್ಣಾ ದೇಸಾಯಿ, ವಿದ್ಯಾಸಾಗರ ಪಾಟೀಲ, ಚೇತನ ವಾಲಿಕಾರ ಪ್ರವಿನ್ ದೊಡ್ಡಮನಿ ಭಾಗವಹಿಸಿದ್ದರು.