ವಿಜಯಪುರ: ಸೀರೆ ಹಂಚಲು ಬಂದಿದ್ದ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಬೆಂಬಲಿಗರಿಗೆ ಮಹಿಳೆ ತರಾಟೆ ತೆಗೆದುಕೊಂಡಿರುವ ಘಟನೆ
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಮೈಬೂಬ್ ನಗರದಲ್ಲಿ ನಡೆದಿದೆ. ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಬೆಂಬಲಿಗರು ಸೀರೆ ಹಂಚುತ್ತಿರುವ ಆರೋಪ ಕೇಳಿಬಂದಿದೆ. ಸೀರೆ ನೀಡಲು ಬಂದಿದ್ದ ಶಾಸಕ ನಡಹಳ್ಳಿ ಬೆಂಬಲಿಗರಿಗೆ ಮಹಿಳೆ ತರಾಟೆ ತೆಗೆದುಕೊಂಡಿದ್ದು, ಐದು ವರ್ಷ ನಡಹಳ್ಳಿ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ. ಒಂದು ಆಶ್ರಮ ಮನೆ ಹಾಕಿ ಕೊಡಲಿಲ್ಲ. ಈಗಾ ಸೀರೆ ಹಂಚೋಕೆ ಬಂದೀರಿ ಎಂದು ಕಿಡಿಕಾರಿದ್ದಾರೆ. ಇದೀಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ನಡಹಳ್ಳಿ ಬೆಂಬಲಿಗರಿಂದ ಸೀರೆ ಹಂಚಿಕೆ ಆರೋಪ
![](https://karnataka1news.com/wp-content/uploads/2023/03/IMG_20230322_165931-860x1216.jpg)