ವಿಜಯಪುರ: ಪುರ ಜಿಲ್ಲೆಗೆ ಭೂಮಿ ಗಢಗಢ ಬೆನ್ನು ಬಿದ್ದಿದ್ದು, ಮತ್ತೆ ಇಂದು 3.9 ತೀವ್ರತೆಯ ಲಘು ಭೂಕಂಪನವಾಗಿದ್ದು, ಜನರು ಭೀತಿಗೊಳ್ಳುವಂತಾಗಿದೆ.
ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಪದೇ ಪದೆ ಲಘು ಭೂಕಂಪನ ಸಂಭವಿಸುತ್ತಿದ್ದು, ಸಾರ್ವಜನಿಕರಲ್ಲಿ ಇನ್ನಿಲ್ಲದ ಆತಂಕ ಮನೆಮಾಡಿದೆ. ವಿಜಯಪುರ ತಾಲೂಕಿನ ಕೌಲಗಿ ಆಗಿದ್ದು, ಪಕ್ಕದ ಉಕ್ಕಲಿ ಗ್ರಾಮ ಸೇರಿದಂತೆ ಸುತ್ತಲಿನ ಗ್ತಾಮದಲ್ಲೂ ಭೂಕಂಪನದ ಅನುಭವಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ, ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಲಘು ಭೂಕಂಪನ ಹಿನ್ನೆಲೆ ಇಂದು ತಜ್ಞರು ವಿಜಯಪುರಕ್ಕೆ ಭೇಟಿ ನೀಡಲಿದ್ದು, ಪದೇ ಪದೆ ಸಂಭವಿಸುತ್ತಿರುವ ಲಘು ಭೂಕಂಪನ ಕುರಿತು ಪರಿಶೀಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.