ವಿಜಯಪುರ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಡಿ ತಡವಲಗಾ ರಸ್ತೆಯಲ್ಲಿ ನಡೆದಿದೆ.
ಅಣ್ಣಪ್ಪಾ ಇಂಡಿ, ಬಾಬುರಾವ್ ಕೇದಾರ ಬಂಧಿತ ಆರೋಪಿಗಳು. ಗುರುರಾಜ್ ಬಿರಾದಾರ ಪರಾರಿಯಾಗಿದ್ದಾನೆ. ಆರೋಪಿಗಳು ಪಿಕ್ ಅಪ್ ವಾಹನದಲ್ಲಿ 640 ಕೆಜಿ ಅಕ್ಕಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಅಕ್ಕಿ, ವಾಹನ ಜಪ್ತಿಗೈದಿದ್ದಾರೆ. ಈ ಕುರಿತು ಹೊರ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/11/IMG-20231119-WA0030-1024x461.jpg)