ವಿಜಯಪುರ: ಸೂಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿಜಯಪುರ ನಗರದಲ್ಲಿ ಎಸ್ಪಿ ಋಷಿಕೇಶ್ ಸೋನಾವಣೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಗಾಲೀಬ್ ಎಂಟಮಾನ್ ಹಾಗೂ ಅಪ್ರಾಪ್ತ ಬಾಲಕ ಬಂಧಿತ ಆರೋಪಿ. ಇನ್ನು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಮಹಾಂತೇಶ ಒಲೇಕಾರನಿಗೆ ಬೈಕ್ನಲ್ಲಿ ಲಿಪ್ಟ್ ನೀಡುವ ನೆಪದಲ್ಲಿ 16 ಸಾವಿರ ನಗದು, ಗೂಗಲ್ಪೇ ಮೂಲಕ 13 ಸಾವಿರ ಹಾಗೂ ಚಿನ್ನದ ಲಾಕಿಟ್, ಉಂಗುರ ಸೂಲಿಗೆ ಮಾಡಿಕೊಂಡು ಎಸ್ಕೇಪ್ ಆಗಿದ್ದರು. ಅದಕ್ಕಾಗಿ ಎಸ್ಪಿ ಭಗವಾನ್ ನೇತೃತ್ವದಲ್ಲಿ ಆದೇಶದ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಚಿನ್ನದ ಲಾಕೆಟ್, ಉಂಗುರ, 8 ಸಾವಿರ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಆಲಮೇಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/10/IMG-20231008-WA0094-1024x768.jpg)