ರಾಯಚೂರು: ರಾಜ್ಯದ ಜನರೇ ಹುಷಾರ್. ದಪ್ಪ ಆಗ್ಬೇಕಾ.. ತೆಳ್ಳಗೆ ಆಗ್ಬೇಕಾ.. ಎಂದು ಜಾಹೀರಾತು ನಂಬುವ ಮುನ್ನ ಎಚ್ಚರ ವಹಿಸಿ. ಹೌದು.. ಹರ್ಬಲ್ ಪ್ರೊಡೆಕ್ಟ್ ಜೀವಕ್ಕೆ ಕುತ್ತು ತಂದಿದೆ. ಬಿಸಿಲೂರು ಖ್ಯಾತಿಯ ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಮಹಿಳೆಯನ್ನು ಹರ್ಬಲ್ ಪ್ರೊಡೆಕ್ಟ್ ಬಲಿ ಪಡೆದುಕೊಂಡಿದೆ. ಪಟ್ಟಣದ 26ನೇ ವಾರ್ಡ್ನ ನಿವಾಸಿ ಅಯಾದ್ ಖಾತೂನ್ ಮೃತಪಟ್ಟಿದ್ದಾರೆ. ಹೆತ್ತಮ್ಮನನ್ನ ಕಳೆದುಕೊಂಡು ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಮೊಣಕಾಲು ನೋವು ಎಂದು ಹರ್ಬಲ್ ಲೈಫ್ ಕಂಪನಿಯ ಔಷಧಿಯನ್ನು ಮಹಿಳೆ ಸೇವಿಸಿದ್ದಾಳೆ. ಹೊಟ್ಟೆಯೊಳಗೆ ಔಷಧಿ ಸೇರುತ್ತಿದ್ದಂತೆ ವಾಂತಿಯಿಂದ ಬಳಲಿ ಸಾವನ್ನಪ್ಪಿದ್ದಾರೆ. ತಕ್ಷಣವೇ ಘಟನೆ ಅರಿತು ಸ್ಥಳಕ್ಕೆ ಧಾವಿಸಿದ್ದ ಫುಡ್ ಆಫೀಸರ್ & ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಹರ್ಬಲ್ ಲೈಫ್ ಪ್ರೊಡೆಕ್ಟ್ ಮಾರಾಟ ಮಾಡುತ್ತಿದ್ದವರ ಮನೆ ಪರಿಶೀಲನೆ ನಡೆಸಿ,
ಹರ್ಬಲ್ ಪ್ರೊಡೆಕ್ಟ್ ಶಾಂಪಲ್ ತೆಗೆದುಕೊಂಡು ಲ್ಯಾಬ್ಗೆ ಅಧಿಕಾರಿಗಳು ಕಳುಹಿಸಿದ್ದಾರೆ.