ವಿಜಯಪುರ: ವಿಜಯಪುರ: ಜಿಲ್ಲಾ ಕೈ ನಾಯಕಿಯರ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಕಳೆದ ಹಲವು ದಿನಗಳಿಂದ ಜಿಲ್ಲಾ ಮಹಿಳಾ ಕಾಂಗ್ರೆಸ್ನಲ್ಲಿ ಇಬ್ಬರು ಮಹಿಳೆಯರು ಮಧ್ಯೆ ಹಾವು ಮುಂಗುಸಿನಂತೆ ಕಿತ್ತಾಟ ಮಾಡುತ್ತಿದ್ದಾರೆ. ಇನ್ನೂ ಇತ್ತೀಚೆಗೆ ಸಿಂದಗಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ ವೇಳೆಯಲ್ಲಿ ಕೈ ಮುಖಂಡರೊಬ್ಬರ ಮನೆಯಲ್ಲೂ ಈ ಇಬ್ಬರು ನಾಯಕಿಯರು ಕಿತ್ತಾಟಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅದೇ ತರಹ ಕಾಂಗ್ರೆಸ್ ಮುಖಂಡರ ಪ್ರಚಾರದ ವೇಳೆಯಲ್ಲಿ ನಾಯಕನ ಪಕ್ಕದಲ್ಲಿ ನಿಲ್ಲುವುದಕ್ಕಾಗಿ ಈ ಇಬ್ಬರ ನಡುವೆ ಮತ್ತೇ ಮಾತಿನ ಚಕಮಕಿ ಆಗಿದೆ. ಅಲ್ಲದೇ, ಈ ಕಿತ್ತಾಟ ಮೂರನೇ ಅವರಿಗೆ ಲಾಭ ಆಗುತ್ತಾ.. ಅಥವಾ ನಾಯಕರು ಈ ಇಬ್ಬರ ಕಿತ್ತಾಟಕ್ಕೆ ಕಡಿವಾಣ ಹಾಕ್ತಾರ ಎಂದು ಕಾಯ್ದು ನೋಡಬೇಕಿದೆ.