ವಿಜಯಪುರ: ಬ್ಲೂಟೂತ್ ಮೂಲಕ ಕೀ ಉತ್ತರ ಹೇಳಿರುವ ಆರೋಪ ಹಿನ್ನಲೆ ಓರ್ವ ಶಿಕ್ಷಕನ್ನು ಅಮಾನತು ಮಾಡಲಾಗಿದೆ ಎಂದು ಡಿಡಿಪಿಐ ಉಮೇಶ ಶಿರಹಟ್ಟಿಮಠ ಹೇಳಿದರು.
ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಬ್ಲ್ಯೂಡಿ ಇಲಾಖೆ ಜೆಇ ಎಇ ನೇಮಕಾತಿ ಅಕ್ರಮ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಶಿಕ್ಷಕ ಗೊಲ್ಲಾಳಪ್ಪ ಸಸ್ಪೆಂಡ್ ಮಾಡಲಾಗಿದೆ.
ಇನ್ನೂ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮೊಬೈಲ್ನಲ್ಲಿ ಫೋಟೋ ತೆಗೆದು ಬ್ಲೂಟೂತ್ ಮೂಲಕ ಕೀ ಉತ್ತರ ಹೇಳಿರುವ ಆರೋಪಕ್ಕಾಗಿ ಶಿಕ್ಷಕ ಗೊಲ್ಲಾಳಪ್ಪ ವಿರುದ್ಧ ಕೇಸ್ ದಾಖಲಾಗಿದೆ. ಸಿಂದಗಿ ಬಿಇಓ ಶಿಸ್ತು ಕ್ರಮದ ವರದಿಯನ್ನಾಧರಿಸಿ ಶಿಕ್ಷಕ ಗೊಲ್ಲಾಳಪ್ಪ ಸಸ್ಪೆಂಡ್ ಮಾಡಲಾಗಿದೆ. ಅಲ್ಲದೇ, ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
![](https://karnataka1news.com/rugleeps/2022/09/IMG-20220922-WA0018-277x300.jpg)