ವಿಜಯಪುರ: ಉರಿಗೌಡ-ನಂಜೇಗೌಡ ವಿವಾದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಿಸಿ ತುಪ್ಪ ಸೇರಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿದ ಅವರು, ಮುಸ್ಲಿಂರನ್ನು ಒಕ್ಕಲಿಗರ ವಿರುದ್ಧ ಎತ್ತಿ ಕಟ್ಟಲು ಮಾಡಿರುವ ಪ್ಲಾನ್ ಇದಾಗಿದೆ. ಉರಿಗೌಡ-ನಂಜೇಗೌಡ ಒಂದು ಕಾಲ್ಪನಿಕ ಕಥೆ. ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಸಾಬರು ಒಂದಾಗ್ತಿದ್ದಾರೆ. ಸಾಬರನ್ನು ಗೌಡರ ಮೇಲೆ ಎತ್ತಿಕಟ್ಟಲು ಶಾಸಕ ಸಿಟಿ ರವಿ ಮಾಡಿರುವ ಪ್ಲಾನ್ ಎಂದು ವಾಗ್ದಾಳಿ ಮಾಡಿದರು. ನಾನು ಮುಸ್ಲಿಂ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಪಕ್ಷ ನನ್ನ ಲೀಡರ್ ಮಾಡಲಿಲ್ಲ.
ಕೌನ್ಸಿಲ್ ನಲ್ಲಿ 25 ರ ಪೈಕಿ 19 ಜನ ಸಪೋರ್ಟ್ ಮಾಡಿದ್ರು, ಆದ್ರೂ ಕಾಂಗ್ರೆಸ್ ಲೀಡರ್ ಮಾಡಲಿಲ್ಲ. ಜೆಡಿಎಸ್ ಮೂರು ಬಾರಿ ಮುಸ್ಲಿಂರನ್ನ ಅಧ್ಯಕ್ಷರನ್ನಾಗಿ ಮಾಡಿದೆ.
ಕಾಂಗ್ರೆಸ್ ಈ ವರೆಗೆ ಮುಸ್ಲಿಂರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ. ಕಾಂಗ್ರೆಸ್ ಹ್ಯಾಂಡ್ಬಿಲ್ ಹಂಚುತ್ತಿದೆ. ಅದ್ರಲ್ಲಿ ಒಬ್ಬೆ ಒಬ್ಬ ಸಾಬರ ಪೋಟೋ ಇಲ್ಲ ಎಂದು ಆರೋಪಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಬೇಡ, ಬಾದಾಮಿ ಬೇಡ… ಮೈಸೂರು ಭಾಗದಲ್ಲಿ ಚುನಾವಣೆಗೆ ನಿಲ್ಲಲಿ. ಸಿದ್ದರಾಮಯ್ಯ ಮೈಸೂರಲ್ಲಿ ಸ್ಪರ್ಧಿಸಿ ಅಸೆಂಬ್ಲಿಗೆ ಬರಲಿ ಎಂದರು.