ವಿಜಯಪುರ: ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಉಪ ಲೋಕಾಯುಕ್ತ ಬಿ ಎಸ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಣಂತಿಯರಿಗೆ ಹೊಲಿಗೆ ಬಿಚ್ಚಿದ ಪ್ರಕರಣ ಹಿನ್ನಲೆ ಆಸ್ಪತ್ರೆಗೆ ಆಗಮಿಸಿ ಆಸ್ಪತ್ರೆಯ ಓಪಿಡಿ, ಲ್ಯಾಬ್, ಬಾಣಂತಿಯರ ವಾರ್ಡಿಗೆ ಭೇಟಿ ನೀಡಿ ಬಾಣಂತಿಯರಿಂದ ಮಾಹಿತಿ ಕಲೆ ಹಾಕಿದರು. ಈ ವೇಳೆಯಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಸರ್ಜನ್ ಲಕ್ಕಣ್ಣವರ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆಯಲ್ಲಿ ಉಪ ಲೋಕಾಯುಕ್ತ ಪಾಟೀಲ ಮಾತನಾಡಿ, ಬಾಣಂತಿಯರ ಹೊಲಿಗೆ ಬಿಚ್ಚಿದ್ದ ಸುದ್ದಿ ಕೇಳಿ ನನಗೂ ಬೇಜಾರಾಯ್ತು ಎಂದರು. ಘಟನೆಗೆ ಕಾರಣವೇನು ಅನ್ನೋದರ ಬಗ್ಗೆ ಪರಿಶೀಲಿಸಲು ಬಂದಿದ್ದೇನೆ. 21 ಬಾಣಂತಿಯರ ಹೊಲಿಗೆ ಬಿಚ್ಚಿತ್ತು. ಆದ್ರೇ, ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ. ಇನ್ನು ಆಗಬಾರದ ಘಟನೆ ಆಗಿದೆ. ಅದಕ್ಕಾಗಿ ಕಾರಣ ಕಂಡು ಹಿಡಿಯಬೇಕಾಗಿದೆ ಎಂದರು. ಡಿಸಿಯವರು ರಿಪೋರ್ಟ್ ಡಾಟಾ ಕಲೆಕ್ಟ್ ಮಾಡಿದ್ದಾರೆ. ನಾನು ಒಂದು ರಿಪೋರ್ಟ್ ಕೇಳಿದ್ದೀನಿ ಎಂದರು.