ವಿಜಯಪುರ: ವಿಜಯಪುರ: ಮಹಾಭಾರತದಲ್ಲಿ ಪಾಂಡವರು ಕೌರವರು ಇದ್ದರು. ರಾಮಾಯಣದಲ್ಲಿ ರಾವಣ ಇದ್ದ ಹಾಗೇ ಕಾಂಗ್ರೆಸ್ ಕೌರವರು, ರಾವಣನ ಪಾತ್ರ ವಹಿಸುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು,
ಹನುಮಾನನನ್ನು ಎಲ್ಲಿ ನೆನೆಯುತ್ತಾರೆ. ಅಲ್ಲಿ ದುಷ್ಟಶಕ್ತಿಗಳು, ಪಿಶಾಚಿಗಳು, ನೀಚರು ಹನುಮಾನ ಚಾಲೀಸ್ ನಿಂದ ನಾಶವಾಗಿ ಓಡಿ ಹೋಗುತ್ತಾರೆ. ಅಯೋಧ್ಯ ರಾಮಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯ ಪೀಠಗಳ ವಿರೋಧ ವಿಚಾರಕ್ಕೆ ಅದು ಅವರವರೊಗೆ ಬಿಟ್ಟದ್ದು. ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆ ಬಳಿಕ ಭಾರತದಲ್ಲಿ ಹಿಂದೂ ಯುವ ಆರಂಭವಾಗುತ್ತದೆ. ಇಡೀ ವಿಶ್ವದಲ್ಲೇ ಹಿಂದೂ ಯುಗ ಆರಂಭವಾಗಲಿದೆ. ಹಿಂದೂ ಧರ್ಮದ ವಿರೋಧಿಗಳಿಗೆ ರಾಮಜನ್ಮ ಭೂಮಿ ಮೂಲಕ ಉತ್ತರ ನೀಡಲಾಗುತ್ತದೆ.
ಸನಾತನ ಧರ್ಮ ಜಗತ್ತನ್ನು ಪಸರಿಸುತ್ತದೆ. ಉಳಿದ ಧರ್ಮದವರೂ ಸಹ ಸನಾತನ ಧರ್ಮಕ್ಕೆ ಬರುತ್ತಾರೆ. ಜಗತ್ತೇ ಹಿಂದೂ ಧರ್ಮವಾಗುತ್ತದೆ ಎಂದರು. ಅಲ್ಲದೇ, ರಾಮಮಂದಿರ ಉದ್ಘಾಟನೆ ಬಳಿಕ ನಾನು ಅಯೋಧ್ಯೆಗೆ ಹೋಗುತ್ತೇನೆ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಅವರಿಗರೆ ಯಾವಾಗ ಸಮಯ ಸಿಗುತ್ತದೆಯೋ ಆಗ ಹೋಗಲಿ. ಒಟ್ಟಾರೆ ಅಯೋಧ್ಯೆಗೆ ಹೋಗುತ್ತಾರಾಲ್ಲ.
ಕಾಂಗ್ರೆಸ್ನ ಒಬ್ಬರಿಗೂ ದೈರ್ಯವಿಲ್ಲ ಎಂದು ಕುಟುಕಿದರು. ನಾನೇನಾದರೂ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಹೈಕಮಾಂಡ್ ನಿರ್ಧಾರ ಧಿಕ್ಕರಿಸುತ್ತಿದ್ದೆ. ನಾನು ಆಯೋಧ್ಯೆಗೆ ಹೋಗುತ್ತಿದ್ದೇ, ಆಯೋಧ್ಯೆ, ಮಥುರಾ, ಕಾಶಿ ನಮ್ಮ ಸನಾತನ ಧರ್ಮದ ಮಹಾ ಪುರುಷರು ರಾಮಮಂದಿರವನ್ನು ಬಿಜೆಪಿಯವರು, ವಿಎಚ್ಪಿ, ಆರ್ ಎಸ್ ಎಸ್ ನವರು ಮಾಡಿದ್ದಾರೆಂದು ಕಾಂಗ್ರೆಸ್ ನವರು ನೋಡಬಾರದಾಗಿತ್ತು. ನೀವು ರಾಮನ ಭಕ್ತರಲ್ಲ. ನೀವು ರಾಮನ ವಿರುದ್ದ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದ್ದೀರಿ. ಈಗಾ ರಾಮ ಇದ್ದಾನೆ, ನಾನು ನೀನು ರಾಮಭಕ್ತರೆಂಬ ಪೈಪೋಟಿ ನಡೆದಿದೆ. ಹೈಕಮಾಂಡ್ ಹೇಳಿದರೆ ರಾಮಮಂದಿರಕ್ಕೆ ಹೋಗುತ್ತೇವೆ ಎಂಬ ಗೃಹ ಸಚಿವ ಜಿ ಪರಮೇಶ್ವರ ಹೇಳಿಕೆ ವಿಚಾರಕ್ಕೆ ಪರಮೇಶ್ವರ ಬಗ್ಗೆ ಗೌರವವಿದೆ, ರಾಜ್ಯದ ಸುಸಂಸ್ಕೃತ ರಾಜಕಾರಣಿಯಾಗಿದ್ದಾರೆ. ಅವರಿಂದ ಇದನ್ನು ನಾನು ನಿರೀಕ್ಷೆ ಮಾಡಲ್ಲ. ನಿತ್ಯ ರಾಮನಾಮ ಸ್ಮರಣೆ ಮಾಡುವೆ ಎಂದು ಕೆ ಎಚ್ ಮುನಿಯಪ್ಪರ ಹಾಗೆ ಇವರೂ ಹೇಳಬೇಕಿತ್ತು. ಹಿಂದೂಗಲೂ ಸಹ ನಿಮಗೆ ಮತ ಹಾಕಿದ್ದಾರೆ. ಹೈಕಮಾಂಡ್ ಹೇಳಿದರೆ ಮಾತ್ರ ಹೋಗುತ್ತೇನೆಂಬ ಹೇಳಿಕೆ ಮೂರ್ಖತನದ್ದು. ನಾಳೆ ಸಾಯಬೇಕಾದರೂ ಹೈಕಮಾಂಡ್ ಪರ್ಮಿಷನ್ ಬೇಡೋ ಪರಸ್ಥಿತಿ ಇದೆ. ಗುಲಾಮಗಿರಿ ಸಂಕೇತವೇ ಕಾಂಗ್ರೆಸ್ ಎಂಬುದಕ್ಕೆ ಪರಮೇಶ್ವರ ಹೇಳಿಕೆ ಕಾಂಗ್ರೆಸ್ನ ಸಂದೇಶ ಎಂದು ವಾಗ್ದಾಳಿ ನಡೆಸಿದರು.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)