ವಿಜಯಪುರ: ಉಜನಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಿರುವ ಹಿನ್ನಲೆ ವಿಜಯಪುರ ಜಿಲ್ಲೆಯ ಇಂಡಿ, ಚಡಚಣ, ಆಲಮೇಲ ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿದರು.
ಇನ್ನು ಹೆಚ್ಚು ನೀರು ಬಂದರೆ ಜಮೀನುಗಳಿಗೆ ಹಾಗೂ ಗ್ರಾಮಗಳಿಗೆ ಭೀಮಾ ನದಿ ನೀರು ನುಗ್ಗುವ ಆತಂಕವಾಗಿದೆ. ಅದಕ್ಕಾಗಿ ಭೀಮಾತೀರದ ಬ್ಯಾರೇಜ್ ಹಾಗೂ ಕೆಲ ಗ್ರಾಮಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಗೂ ಆಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ,ನದಿ ತೀರದ ಗ್ರಾಮಗಳ ಜನರು ಸುರಕ್ಷತಾ ಕ್ರಮ ತೆಗದುಕೊಳ್ಳುವಂತೆ ಮನವಿ ಮಾಡಲಾಯಿತು.
ಜನ ಜಾನುವಾರುಗಳು ನದಿಯಲ್ಲಿ ಇಳಿಯಬಾರದೆಂದು ಸೂಚನೆ ನೀಡಿದ್ದು, ಪ್ರವಾಹ ಉಂಟಾದರೆ ಸಮರ್ಪಕವಾಗಿ ಪ್ರವಾಹ ಎದುರಿಸೋದಾಗಿ ಡಿಸಿ ಜನರಿಗೆ ಭರವಸೆ ನೀಡಿದರು.