ವಿಜಯಪುರ: ಮಣ್ಣು ಉಳಿಸಿ ಅಭಿಯಾನದಡಿ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಮಣ್ಣು ಉಳಿಸಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.
ಈಗಿನ ಕಾಲದಲ್ಲಿ ಮಣ್ಣಿನ ಜೈವಿಕತೆ ಹಾಳಾಗುತ್ತಿರುವ ಕಾರಣದಿಂದ ಸಸಿಗಳಿಗೆ ಹಾಗೂ ಪ್ರಾಣಿಗಳಿಗೆ ಸೇರಿದಂತೆ ಮನುಕುಲಕ್ಕೆ ಹಾನಿಯಾಗುತ್ತಿದ್ದು, ಮಣ್ಣು ಉಳಿಸಿ ಪರಿಸರ ಉಳಿಸಿ ಎನ್ನುವ ಘೋಷಣೆಯಿಂದಿಗೆ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರು.