ವಿಜಯಪುರ: ಕಾರಹುಣ್ಣಿಮೆ ಕರಿ ಹರಿಯುವ ವೇಳೆ ಭೀಮಾನದಿಗೆ ಹಾರಿ ಪ್ರಾಣಬಿಟ್ಟ ಎತ್ತು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದಲ್ಲಿ ನಡೆದಿದೆ.
ರೈತ ಸತೀಶ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಇದಾಗಿದೆ. ಇನ್ನು ಕಾರಹುಣ್ಣಿಮೆ ಕರಿ ಹರಿದ ಬಳಿಕ ಎತ್ತುಗಳ ಮೆರವಣಿಗೆ ನಡೆದಿತ್ತು. ಈ ವೇಳೆ ಹಲಗೆ ಬಾರಿಸುವ ಶಬ್ದಕ್ಕೆ ಬೆದರಿದ ಎತ್ತು ಗ್ರಾಮದ ಹೊರಗೆ ಓಡಿದೆ. ಹೊರವಲಯದಲ್ಲಿರುವ ಭೀಮಾ ನದಿಗೆ ಹಾರಿದೆ. ಈ ವೇಳೆಯಲ್ಲಿ ಮೀನುಗಾರರ ಬಲೆಗೆ ಸಿಲುಕಿ ಮೃತಪಟ್ಟಿದೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.