ವಿಜಯಪುರ: ಹಿಂದೂ ಸಂಘಟನೆ ಮಹಿಳಾ ನಾಯಕಿಯರಿಂದ ದುರ್ಗಾ ದೌಡ್ ಪಾದಯಾತ್ರೆ ಸೋಮವಾರ ವಿಜಯಪುರ ನಗರದಲ್ಲಿ ನಡೆಯಿತು.
ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಶಿವಾಜಿ ವೃತ್ತದ ವರಗೆ ಪಾದಯಾತ್ರೆ ಮಾಡಲಾಯಿತು.
ನಗರದ ಪ್ರಮುಖ ಏರಿಯಾಗಳಲ್ಲಿ ಪಾದಯಾತ್ರೆ ಮಾಡಿ ಧರ್ಮ ಜಾಗೃತಿ ಮಾಡಿದ್ದು, ಕಾರ್ಯಕ್ರಮದಲ್ಲಿ ಭಗವಾಧ್ವಜ ಹಾಗೂ ತಲ್ವಾರ್ ಹಿಡಿದು ಧರ್ಮ ಜಾಗೃತಿ ಮಂಡಿಸಲಾಯಿತು. ಇನ್ನು
ಲವ್ ಜಿಹಾದ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಲವ್ ಜಿಹಾದ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಯುವತಿಯರಿಗೆ ಸೂಚನೆ ನೀಡಲಾಯಿತು.
ದಿಶಾ ಫೌಂಡೇಶನ್ ಹಾಗೂ ಹಿಂದೂ ನಾಯಕಿ ಮಂಚಾಲೇಶ್ವರಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ಅಲ್ಲದೇ, ಮಹಾರಾಷ್ಟ್ರದ ಶಿವಪ್ರತಿಷ್ಠಾನದ ಸಿದಗೊಂಡ ಮಲ್ಲಪ್ಪ ಗೂರುಜಿ ಮಾರ್ಗದರ್ಶನದಲ್ಲಿ ದುರ್ಗಾ ದೌಡ್ ಕಾರ್ಯಕ್ರಮ ಜರುಗಿತು.