ವಿಜಯಪುರ: ಪರಿಹಾರಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಅನ್ನೋದು ತಪ್ಪು ಎಂದು ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು,
ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಎನ್ನುವ ಸಚಿವ ಶಿವಾನಂದ ಪಾಟೀಲ ಹೇಳಿಕೆಗೆಸಚಿವ ಶರಣಬಸಪ್ಪ ದರ್ಶನಾಪೂರ ಆಕ್ಷೇಪ ವ್ಯಕ್ತ ಪಡಿಸಿದರು. ಒಮ್ಮೆ ಜೀವ ಹೋದರೆ ವಾಪಸ್ ಸಿಗೊದಿಲ್ಲ. ಏನಾದರೂ ತೊಂದರೆ ಇದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿರ್ತಾರೆ. ಬೆಲೆ ಏರಿಕೆಯಿಂದ ರೈತರು ಕಷ್ಟಕ್ಕೆ ಒಳಗಾಗಿರೋದನ್ನ ನೋಡ್ತಾ ಇದ್ದೇವೆ. ಆದ್ರೇ, 5 ಗ್ಯಾರಂಟಿಗಳ ಮೂಲಕ ಬಡ ಕುಟುಂಬಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗ್ತಿದೆ ಎಂದರು.
![](https://karnataka1news.com/wp-content/uploads/2023/09/IMG_20230906_130623.jpg)