ದಾವಣಗೆರೆ: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಯಶಸ್ವಿ ಆಗಬೇಕಿದ್ರೆ ಎರಡು ಮಠ ಒಂದಾಗಬೇಕು. ಅಂದಾಗ ಮಾತ್ರ ಪಂಚಮಸಾಲಿಗಳಿಗೆ ಮೀಸಲಾತಿ ಸಿಗುತ್ತದೆ ಎಂದು ಪಂಚಮಸಾಲಿ ಮುಖಂಡ ಎಚ್.ಎಸ್. ನಾಗರಾಜ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಹರಿಹರ ವಚನಾನಂದ ಶ್ರೀ ಹಾಗೂ ಜಯಮೃತ್ಯುಂಜಯ ಸ್ವಾಮಿ ಒಂದಾಗಬೇಕಿದೆ. ಎರಡು ಪೀಠಗಳು ಒಂದಾದರೆ ಸರ್ಕಾರದ ಗಮನ ಸೆಳೆಯಬಹುದು. ಎಲ್ಲಾ ಭಕ್ತರು, 2 ಸ್ವಾಮೀಜಿಗಳನ್ನು ಒಂದು ಮಾಡಲು ಬಂದಿದ್ದೇವೆ. ಇಬ್ಬರು ಸ್ವಾಮಿಗಳು ಒಂದಾರೆ ಮೀಸಲಾತಿಯೂ ಶೀಘ್ರವಾಗಿ ಸಿಗುತ್ತದೆ ಎಂದರು.