ವಿಜಯಪುರ: ಹೆಣ್ಣು ಮಗು ಜನಿಸಿದಕ್ಕೆ ಪಾಪಿ ತಾಯಿಯೊಬ್ಬಳು ಹೆಣ್ಣು ಶಿಶುವನ್ನು ರಸ್ತೆಯ ಪಕ್ಕದ ಮುಳ್ಳಿನ ಪೊದೆಯಲ್ಲಿ ಎಸೆದು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.
ದೊರೆತ ನವಜಾತ ಹೆಣ್ಣು ಶಿಶು ಮಗುವನ್ನು ಗ್ರಾಮ ಯುವ ಮುಖಂಡರಾದ ಸಿದ್ದರಾಮ ಕೊಟ್ಟಲಗಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ರಕ್ಷಣೆ ಮಾಡಿದ್ದಾರೆ. ಅಲ್ಲದೇ, ಶಿಶುವನ್ನು ಹಲಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ರವಾನೆ ಮಾಡಿದ್ದಾರೆ.