ವಿಜಯಪುರ: ನಾಡಿನೆಲ್ಲೆಡೆ ಸಂಭ್ರಮದ ಆಯುಧ ಪೂಜೆ ನಡೆಯುತ್ತಿದೆ. ಅದೇ ತರಹ ವಿಜಯಪುರ ಜಿಲ್ಲೆಯ ವಿವಿಧ ಠಾಣೆಗಳಲ್ಲೂ ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ನಡೆಸಲಾಯಿತು.
ಆರಕ್ಷಕರು ಖಾಕಿ ಬಟ್ಟೆಯಲ್ಲಿ ಜಬರ್ದಸ್ತ್ ಆಗಿ ಕಾಣುತ್ತಿದ್ದರು. ಆದ್ರೇ, ಇಂದು ಸಾಂಪ್ರದಾಯಿಕ ಶೈಲಿಯ ಬಿಳಿ ಧರಿಸನ್ನು ತೊಟ್ಟು ಪಂಚೆ, ಬಿಳಿ ಗಾಂಧಿ ಟೋಪಿ ಹಾಗೂ ಶರ್ಟ್ ನಲ್ಲಿ ಮಿಂಚಿದರು. ಗಾಂಧಿಚೌಕ್, ಆದರ್ಶನಗರ, ಮಹಿಳಾ, ಸೈಬರ್ ಕ್ರೈಂ, ಗೋಳಗುಮ್ಮಟ್, ಗ್ರಾಮೀಣ ಠಾಣೆಯಲ್ಲಿ ಆಯುಧಗಳಿಗೆ ಪೂಜೆ ನಡೆಸಿದರು.
ಎಸ್ಪಿ ಎಚ್ಡಿ ಆನಂದಕುಮಾರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಅಲ್ಲದೇ, ವಾಹನಗಳು, ರಿವಾಲ್ವಾರ್, ಬಂದೂಕುಗಳನ್ನು ಅಲಂಕಾರಗೊಳಿಸಿ ಪೂಜಾ ಕೈಂಕರ್ಯ ನೆರವೇರಿತು. ಪೂಜೆಯ ಬಳಿಕ ಸಿಬ್ಬಂದಿಗಳಿಗೆ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡಿರುವ ಫೋಟೊ ಕರ್ನಾಟಕಒನ್ನ್ಯೂಸ್ಗೆ ಲಭ್ಯವಾಗಿವೆ.
*ಸಮಸ್ತ ನಾಡಿನ ಜನತೆಗೆ K1N ಕಡೆಯಿಂದ ದಸರಾ ಹಬ್ಬದ ಶುಭಾಶಯಗಳು*