ವಿಜಯಪುರ: ಹಬ್ಬಗಳೆಂದರೆ ಮಹಿಳೆ ಯರಿಗೆ ಎಲ್ಲಿಲ್ಲದ ಸಂಭ್ರಮ. ತರಹೇವಾರಿ ಅಲಂಕಾರ ಮಾಡಿಕೊಂಡು ಪೂಜೆಗೆ ನಿಂತರೆ ದೇವರೆ ಮನೆಯಲ್ಲಿ ಪೂಜೆ ಮಾಡುತ್ತಿದ್ದಾನೆನೋ ಎನ್ನೊ ಮಟ್ಟಿಗೆ ಅಲಂಕಾರ ಮಾಡಿಕೊಂಡು ಭಕ್ತಿ ಶ್ರದ್ಧೆಯಿಂದ ಪೂಜಿಸುವವರು ಮಹಿಳೆಯರು.
ಅದರಲ್ಲೂ ನವರಾತ್ರಿ ಹಬ್ಬ ಎಂದರೆ ಒಂಬತ್ತು ದಿನಗಳ ಕಾಲ ಒಂಭತ್ತು ಬಣ್ಣದ ಸೀರೆಯುಟ್ಟು ಸಂಭ್ರಮಿಸೋದು ನವರಾತ್ರಿ ವಿಶೇಷ. ನವರಾತ್ರಿ ಹಬ್ಬವು ಇದೀಗ ಮೂರನೇ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮಹಿಳೆಯರು ನವಶಕ್ತಿಯರ ಆರಾಧನೆಯಲ್ಲಿ ತೊಡಗಿದ್ದಾರೆ. ಅದರಲ್ಲೂ ಶಿಕ್ಷಕರು ಎಂದ್ರೆ ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ಮುಂದಿನ ಪಿಳಿಗೆಗೆ ಅರ್ಥ ಮಾಡಿಸುವವರು. ತಾವು ಸಂಸ್ಕೃತಿ ಪರಂಪರೆಯ ಮಹತ್ವ ಹೇಳಿಕೊಡೊದು ಅಷ್ಟೇ ಅಲ್ಲದೇ ಅದನ್ನು ತಾವು ಪಾಲಿಸಿ ಮುದ್ದಿನ ಮಕ್ಕಳಿಗೆ ಮಾದರಿಯಾಗುತ್ತಾರೆ.
ಅದ್ರಂತೆ ವಿಜಯಪುರ ನಗರದ ಗುರುದೇವ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ನವರಾತ್ರಿ ಅಂಗವಾಗಿ ಹಳದಿ ಬಣ್ಣದಲ್ಲಿ ಶಾಲೆಯ ಎಲ್ಲಾ ಮಹಿಳಾ ಶಿಕ್ಷಕರು ಕಂಗೊಳಿಸಿದರು. ಇನ್ನೂ ಹಳದಿ ಬಣ್ಣವು ಆಶಾವಾದ ಮತ್ತು ಸಂತೋಷಕ್ಕೆ ಹೆಸರುವಾಸಿಯಾಗಿದೆ.
ಅದರಲ್ಲೂ ಮುತ್ತೈದೆಯರಿಗೆ ಅರಿಶಿಣ ಕುಂಕುಮ ನೀಡಿ ಗೌರವಿಸುವ ಸಂಪ್ರದಾಯ ನಮ್ಮ ದೇಶದಲ್ಲಿ ಇರೊದ್ರಿಂದ ನಾಲ್ಕನೇ ದಿನಕ್ಕೆ ಎಲ್ಲಾ ಮಹಿಳೆಯರು ಹಳದಿ ವರ್ಣದ ಸೀರೆ ಧರಿಸಿ ಮಿಂಚಿದರು.