ವಿಜಯಪುರ: ಟಿಪ್ಪು ಸುಲ್ತಾನ್ ಬೆನ್ನು ಹತ್ತಿದವರಿಗೆ ರಾಜಕೀಯ ಭವಿಷ್ಯವಿಲ್ಲ. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಸೂಕ್ತ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಮೈಸೂರಲ್ಲಿ ಟಿಪ್ಪು ಸುಲ್ತಾನ ಏನು ಅಂತ ಇತಿಹಾಸ ಇದೆ.
ಮೈಸೂರು ಭಾಗ ಅಭಿವೃದ್ಧಿ ಆಗಲು ಮಹರಾಜರು ಕಾರಣರು. ಈ ಭಾಗ ಏಕೆ ಅಭಿವೃದ್ದೀ ಆಗಲಿಲ್ಲ ಅಂದ್ರೆ ಆದಿಲ್ ಶಾಹಿ, ಕುತುಬ್ ಶಾಹಿ, ಆ ಶಾಹಿ, ಈ ಶಾಹಿ ಇವರು ಕೇವಲ ತಮ್ಮ ಹೆಂಡಿರು, ಮಕ್ಕಳು, ಪ್ರಿಯತಮೆಯರೆ ಗೋರಿ ಮಾಡುವುದನ್ನ ಬಿಟ್ರೇ ಏನು ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಗೋಲಗುಂಜ್, ಬೀದರ, ರಾಯಚೂರಗೆ ಹೋಗಿ ನೋಡಿ ಬರಿ ಗೋರಿಗಳೆ ಇದಾವೆ. ನೀರಾವರಿ ಮಾಡಲಿಲ್ಲ. ಮೈಸೂರು ಒಡೆಯರ ಅವರು ಬಂಗಾರ ಒತ್ತೆ ಇಟ್ಟು ಕನ್ನಮಬಾಡಿ ಕಟ್ಟಿದರು. ಯಾರು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ಅವರ ಹೆಸರು ಇಡಬೇಕು ಎಂದರು. ಸಂಸದ ಪ್ರತಾಪ್ ಸಿಂಹ ಪರ ಯತ್ನಾಳ ಬ್ಯಾಟಿಂಗ್ ಮಾಡಿದ್ದಾರೆ. ಯಾವುದೇ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರ ಬಳಿ ಜನರ ಪಾಸ್ ಕೊಡಿ ಅಂತಾ ಬರ್ತಾರೆ. ಕಾಂಗ್ರೆಸ್ನವರು ಬಂದ್ರೂ ನಾವು ಪಾಸ್ ಕೊಡ್ತೆವೆ. ನನ್ನ ಬಳಿ ಕಾಂಗ್ರೆಸ್ನವರು ಬಂದು ಪಾಸ್ ಒಯ್ಯುತ್ತಾರೆ. ಅದನ್ನು ಸ್ಕ್ರೀನಿಂಗ್ ಯಾರು ಮಾಡಬೇಕು. ಸೆಕ್ಯುರಿಟಿ ಅವರು ಮಾಡಬೇಕು. ಇನ್ನು ಅದು ತನಿಖೆ ಆದ್ರೆ, ಯಾರು ಟೀಕೆ ಮಾಡುತ್ತಿದ್ದಾರೋ ಅವರೆ ಸಿಕ್ಕಿಬೀಳ್ತಾರೆ. ಕಾದು ನೋಡಿ ಎಂದರು.
ಸಿಂಹ ಪರ ಹಿಂದೂ ಹುಲಿ ಬ್ಯಾಟಿಂಗ್
![](https://karnataka1news.com/wp-content/uploads/2023/11/FB_IMG_1680862609609-1-860x1147.jpg)