ವಿಜಯಪುರ: ನನ್ನನ್ನು ಇಂಡಿಯಾದಿಂದ ಪಾಕಿಸ್ತಾನಕ್ಕೇನು ಹಾಕಿಲ್ಲ ಎಂದು ನೂತನ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲೆ ನಮ್ಮನ್ನ ಬದಲಾವಣೆ ಮಾಡಿದ್ದಾರೆ. ಇನ್ನು ಉಸ್ತುವಾರಿ ಬದಲಾವಣೆಯಿಂದ ಸಚಿವರಲ್ಲಿ ಯಾವುದೇ ಅಸಮಧಾನ ಇಲ್ಲ. ರಾಜ್ಯದಲ್ಲಿ 30 ಮಂತ್ರಿಗಳಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ನಾವ್ಯಾರು ಅಸಮಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು. ನನಗೆ ಬಾಗಲಕೋಟೆಯಿಂದ ವಿಜಯಪುರ ಕೊಟ್ಟರು ಇಲ್ಲಿಗೆ ಬಂದಿದ್ದೀನಿ ತಪ್ಪೇನಿದೆ ಎಂದರು. ಅಲ್ಲದೇ, ಸಚಿವ ಸಂಪುಟ ಬದಲಾವಣೆ ನಿರಂತರ ಜ್ಯೋತಿ ಇದ್ದಂತೆ. ಮಂತ್ರಿ ಮಂಡಲ ಬದಲಾವಣೆ ನಿರಂತರ ಜ್ಯೋತಿ ಆಗಿದೆ. ಬದಲಾವಣೆ ಕಂಡು ಬರ್ತಿಲ್ಲ. ಆದ್ರೇ, ಶಾಸಕ ಯತ್ನಾಳ್ ಸಚಿವರಾಗೋದು ಪಕ್ಕ. ಯತ್ನಾಳ್ ರಿಗೆ ಸಧ್ಯದಲ್ಲೆ ಮಂತ್ರಿಗಿರಿ ಸಿಗಲಿದೆ ಉಮೇಶ ಕತ್ತಿ ಭವಿಷ್ಯ ನುಡಿದರು.