ವಿಜಯಪುರ: ಜೂಲುಸ್ ಇ ಈದ್ ಮಿಲಾದುನ್ನಬಿ ಕಮಿಟಿ ನೇತೃತ್ವದಲ್ಲಿ ಜೂಲುಸ್ ಶಾಂತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಲ್ಪಸಂಖ್ಯಾತ ಧರ್ಮಗುರು ಸೈಯದ್ ತನ್ವೀರ ಪೀರಾ ಹಾಸ್ಮಿ ಹೇಳಿದರು.
ವಿಜಯಪುರ ನಗರದಲ್ಲಿ ಗುರುವಾರ ಮಾತನಾಡಿದ ಅವರು, ಅಕ್ಟೋಬರ್ 9ರಂದು ಜೂಲುಸ್ ಶಾಂತಿ ಯಾತ್ರೆ ನಗರಾದ್ಯಂತ ನಡೆಯಲಿದೆ. ಹಜರತ್ ಮಹಮ್ಮದ್ ಪೈಗಂಬರ್ ಅವರು ಪ್ರೀತಿ, ಸೌಹಾರ್ದದಿಂದ ಬಾಳಲು ದಾರಿ ತೋರಿಸಿದ್ದಾರೆ. ಅದಕ್ಕಾಗಿ ಶಾಂತಿ ಯಾತ್ರೆಯಲ್ಲಿ ಸಮಾಜದ ಬಾಂಧವರು, ಸಮಾಜದ ಮುಖಂಡರು, ಧಾರ್ಮಿಕ ಮುಖಂಡರು, ಸ್ಥಳೀಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.